SK Home Ad
Home ಸುದ್ದಿ ದೇಶ ಮಾಧುರಿ ಮರಳಿ ಕೊಲ್ಹಾಪುರಕ್ಕೆ: ವನತಾರಾದಿಂದ ಮಹತ್ವದ ಹೇಳಿಕೆ

ಮಾಧುರಿ ಮರಳಿ ಕೊಲ್ಹಾಪುರಕ್ಕೆ: ವನತಾರಾದಿಂದ ಮಹತ್ವದ ಹೇಳಿಕೆ

0
10

ಜಾಮ್‌ನಗರ: ಹೆಣ್ಣಾನೆ ಮಾಧುರಿ (ಮಹಾದೇವಿ) ಕುರಿತು ಅನಂತ್ ಅಂಬಾನಿ ನೇತೃತ್ವದಲ್ಲಿ ನಡೆಯುತ್ತಿರುವ ವನತಾರಾದಿಂದ ಹೇಳಿಕೆಯೊಂದನ್ನು ಬಿಡುಗಡೆ ಮಾಡಲಾಗಿದೆ. ವನ್ಯಜೀವಿಗಳ ಸಂರಕ್ಷಣೆ, ಪಾಲನೆ-ಪೋಷಣೆಗಾಗಿ ಮೀಸಲಾದ ಈ ಸಂಸ್ಥೆಯು ಭಾರೀ ಚರ್ಚೆಗೆ ಕಾರಣವಾಗಿದ್ದ, ಭಾವನಾತ್ಮಕ ನಂಟನ್ನು ಹೊಂದಿದ್ದ ಕೊಲ್ಹಾಪುರದ ಹೆಣ್ಣಾನೆ ಮಾಧುರಿ ಕುರಿತಂತೆ ಮಹತ್ತರವಾದ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಮಾಧುರಿ, ಕೊಲ್ಹಾಪುರದಲ್ಲಿ ಪರಿಚಿತವಾಗಿರುವುದು ಹಾಗೂ ಪ್ರೀತಿಸುವುದು ಮಹಾದೇವಿಯಾಗಿ. ಈ ಹೆಣ್ಣಾನೆ ಜಾಮ್ ನಗರದಲ್ಲಿನ ವನತಾರಾಕ್ಕೆ ಬಂದಿದ್ದು 2025ರ ಜುಲೈ 30ನೇ ತಾರೀಖು. ಹೈ ಪವರ್ಡ್ ಕಮಿಟಿ (ಎಚ್‌ಪಿಸಿ) ನಿರ್ದೇಶನದ ನಿಯಮಾನುಸಾರವಾಗಿಯೇ ವನತಾರಾಕ್ಕೆ ಕರೆತರಲಾಗಿತ್ತು. ಆ ನಂತರ ಎಚ್‌ಪಿಸಿ ನಿರ್ದೇಶನವನ್ನು ಗೌರವಾನ್ವಿತ ಬಾಂಬೆ ಹೈಕೋರ್ಟ್ ಹಾಗೂ ಗೌರವಾನ್ವಿತ ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿಯಿತು. ವನತಾರಾದಿಂದ ಮಾಧುರಿಯನ್ನು ತಮಗೆ ಒಪ್ಪಿಸುವಂತೆ ಸಹ ಕೇಳಿರಲಿಲ್ಲ. ಆದರೆ ವನತಾರಾದಿಂದ ಆ ಹೆಣ್ಣಾನೆಯನ್ನು ಸ್ವೀಕರಿಸಿದ್ದು ಹಾಗೂ ಕಾಳಜಿ ಮಾಡಿದ್ದು ಆ ರೀತಿಯಾಗಿ ಮಾಡುವಂತೆ ನಿರ್ದೇಶನ ನೀಡಿದ್ದರಿಂದ ಮಾತ್ರ.

ಕೊಲ್ಹಾಪುರದಲ್ಲಿ ಮಾಧುರಿ ಸುತ್ತ ಇರುವಂಥ ಆಳವಾದ ಭಾವನಾತ್ಮಕ ಬಂಧವನ್ನು ನಾವು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ. ಮಹಾರಾಷ್ಟ್ರ ಸರ್ಕಾರ, ಅದರ ಅಧಿಕಾರಿಗಳು, ಇತರ ಭಾಗೀದಾರರು ಮತ್ತು ಸಮುದಾಯ ಸದಸ್ಯರ ಜೊತೆಗೆ ಚರ್ಚೆ ಮಾಡಿದ ನಂತರ, ವನತಾರಾದಿಂದ 2025ರ ಆಗಸ್ಟ್ 6ರಂದು ಹೇಳಿಕೆ ನೀಡಲಾಯಿತು: ಸಂಸ್ಥೆಯು ಈ ಭಾವನೆಗಳನ್ನು ಗೌರವಿಸುತ್ತದೆ ಮತ್ತು ಸಕ್ಷಮ ಪ್ರಾಧಿಕಾರದ ನಿರ್ದೇಶನಕ್ಕೆ ಬದ್ಧವಾಗಿರುತ್ತದೆ.

ಗೌರವಾನ್ವಿತ ಸುಪ್ರೀಂ ಕೋರ್ಟ್ ಆನಂತರದಲ್ಲಿ ಪಕ್ಷದಾರರಿಗೆ ತಮ್ಮ ವಾದವನ್ನು ಎಚ್‌ಪಿಸಿ ಮುಂದಿಡುವಂತೆ ನಿರ್ದೇಶನ ನೀಡಿತು. ಪಕ್ಷದಾರರ ಅಹವಾಲನ್ನು ಕೇಳಿಕೊಂಡ ನಂತರ, ವರದಿಯನ್ನು ಹಾಗೂ ನಂದನಿಯಲ್ಲಿನ ವ್ಯವಸ್ಥೆ- ಕೇಂದ್ರ ಹೇಗಿದೆ ಎಂದು ಪರಿಶೀಲಿಸಲು ತಿಳಿಸಲಾಯಿತು. 2026ರ ಸೆಪ್ಟೆಂಬರ್ 9ನೇ ತಾರೀಕು ಎಚ್ ಪಿಸಿಯಿಂದ ಒಂದು ಕಾರಣ ಸಹಿತವಾದ ಆದೇಶವನ್ನು ನೀಡಿದ್ದು, ಕಠಿಣವಾದ ಷರತ್ತುಗಳೊಂದಿಗೆ ಮಾಧುರಿಯನ್ನು ಕೊಲ್ಹಾಪುರಕ್ಕೆ ಹಿಂತಿರುಗಿಸಲು ಅನುಮತಿ ನೀಡಿತು. ಅದರಲ್ಲಿ ಇದ್ದ ನಿಯಮ ಪ್ರಕಾರ ಮಾಧುರಿಯನ್ನು ಮೆರವಣಿಗೆ ಅಥವಾ ಬೇರೆ ಯಾವುದೇ ಇತರ ಉದ್ದೇಶಗಳಿಗೆ ಬಳಸಬಾರದು, ಸದಾ ಕಾಲ ಹೆಣ್ಣಾನೆ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಹಾಗೂ ಪ್ರತಿ ಹದಿನೈದು ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ಆಗಬೇಕು ಎಂಬ ಷರತ್ತುಗಳನ್ನೂ ಒಳಗೊಂಡಿತ್ತು.

ಆ ಸಂದರ್ಭದಲ್ಲಿ ಎಚ್ ಪಿಸಿಯ ಅಧಿಕಾರವನ್ನು ವನತಾರಾ ಗೌರವಿಸಿ, ಆ ಎಲ್ಲ ನಿರ್ದೇಶನಗಳಿಗೂ ಸಂಪೂರ್ಣವಾಗಿ ಬದ್ಧವಾಗಿತ್ತು. ಮಾಧುರಿಯ ಕುರಿತಾದ ನಮ್ಮ ನಿಲುವು ಯಾವಾಗಲೂ ಪಶುವೈದ್ಯಕೀಯ ವಿಜ್ಞಾನ ಮತ್ತು ಅವಳ ಒಳಿತಿಗೆ ಏನು ಮಾಡಬೇಕೋ ಅದರಂತೆಯೇ ತೆಗೆದುಕೊಳ್ಳಲಾಗಿದೆ. ನಿರಂತರ ಪಶುವೈದ್ಯಕೀಯ ಆರೈಕೆಯ ಮೂಲಕ ಮಾಧುರಿ ಸ್ಥಿತಿಯನ್ನು ಸ್ಥಿರಗೊಳಿಸಲಾಗಿದೆ, ಆದರೆ ಅವಳ ದೀರ್ಘಕಾಲದ ಕಾಯಿಲೆಗಳು ಮಾಯವಾಗಿಲ್ಲ. ಅವಳಿಗೆ ಸೂಕ್ತವಾದ ಆರೈಕೆ, ಬೆಂಬಲ ನಿರ್ವಹಣೆ ಮತ್ತು ನಿಯಮಿತ ಪಶುವೈದ್ಯಕೀಯ ಮೇಲ್ವಿಚಾರಣೆ ಮುಂದುವರಿಯುವ ಅಗತ್ಯವಿದೆ.

ಕೊಲ್ಹಾಪುರಕ್ಕೆ ಮಾಧುರಿಯನ್ನು ವಾಪಸ್ ಕಳುಹಿಸುವುದರೊಂದಿಗೆ ನಮ್ಮ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ. ಸೂಕ್ತ ವಾಸಸ್ಥಳಗಳು, ಪಶುವೈದ್ಯಕೀಯ ಮೂಲ ಸೌಕರ್ಯಗಳು, ವೈದ್ಯಕೀಯ ಉಪಕರಣಗಳು, ಔಷಧಿಗಳು ಮತ್ತು ಇತರ ಅಗತ್ಯಗಳು ಸ್ಥಳದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಹೆಣ್ಣಾನೆಯ ಪರಿವರ್ತನೆಯನ್ನು ಬೆಂಬಲಿಸಲು ವನತಾರಾ ಕೆಲಸ ಮಾಡಿದೆ. ಎಚ್‌ಪಿಸಿ (HPC) ನಿರ್ದೇಶನದಂತೆ, ಕೊಲ್ಹಾಪುರದಲ್ಲಿರುವ ಮಾಧುರಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಮತ್ತು ಸಕ್ಷಮ ಪ್ರಾಧಿಕಾರಗಳಿಗೆ ವರದಿಗಳನ್ನು ಸಲ್ಲಿಸಲು ವನತಾರಾದ ಪಶುವೈದ್ಯರು ಪ್ರತಿ ಹದಿನೈದು ದಿನಗಳಿಗೊಮ್ಮೆ ಭೇಟಿ ನೀಡುತ್ತಾರೆ. ಇದು ಆರೈಕೆಯ ನಿರಂತರತೆ ಮತ್ತು ಮಾಧುರಿ ಎಲ್ಲೇ ಆಶ್ರಯ ಪಡೆದಿದ್ದರೂ ಅವಳ ಒಳಿತನ್ನು ಕಾಪಾಡುವ ಬಗ್ಗೆಯ ಸಂಗತಿಯಾಗಿದೆ.

ಮಾಧುರಿಯು ಈಗ ಹಿಂತಿರುಗುತ್ತಿರುವ ನಂದಿನಿಯಲ್ಲಿರುವ ಆವರಣ ಮತ್ತು ಸೌಲಭ್ಯದ ಮೇಲೂ ವನತಾರಾ ಕೆಲಸ ಮಾಡಿದೆ. ಲಭ್ಯವಿರುವ ಮೂಲಸೌಕರ್ಯಗಳ ಒಳಗೆ ಆಕೆಗಾಗಿ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಟ್ರಸ್ಟ್‌ನ ಜಮೀನಿನ ಮೂಲಕ ಹೋಗುವ ರಸ್ತೆಯ ಅಭಿವೃದ್ಧಿಗೆ ಲಭ್ಯವಿರುವ ಭೂಮಿಯೂ ಕಡಿಮೆ ಇರುವುದರಿಂದ, ಪಟ್ಟಣ ಯೋಜನೆ (ಟೌನ್ ಪ್ಲಾನಿಂಗ್) ನಿರ್ಬಂಧಗಳ ಕಾರಣದಿಂದ ಈ ಹಂತದಲ್ಲಿ ಮೂಲಸೌಕರ್ಯಗಳಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಮಾಧುರಿಯು ನೆಲೆಯಾದ ನಂತರದಲ್ಲಿ ಇರುವ ಸೌಲಭ್ಯದ ನವೀಕರಣಕ್ಕಾಗಿ ಮಠಕ್ಕೆ ವನತಾರಾ ಸದಾ ಲಭ್ಯವಿರುತ್ತದೆ. ನ್ಯಾಯಾಲಯಗಳು ಅಥವಾ ಸಕ್ಷಮ ಪ್ರಾಧಿಕಾರಗಳು ನಿರ್ದೇಶಿಸಿದರೆ ವನತಾರಾದಿಂದ ಅಂತಹ ನವೀಕರಣದಲ್ಲಿಯೂ ಸಹಕರಿಸಲಾಗುತ್ತದೆ.

ನಿಜವಾದ ಪ್ರಾಣಿ ಕಲ್ಯಾಣಕ್ಕೆ ವಾಸ್ತವಗಳು, ಪಶುವೈದ್ಯಕೀಯ ವಿಜ್ಞಾನ, ಜವಾಬ್ದಾರಿಯುತ ಆರೈಕೆ, ಕಾನೂನು ಪ್ರಕ್ರಿಯೆಯ ಗೌರವ ಮತ್ತು ಜೀವವನ್ನು ಎಂದೆಂದಿಗೂ ರಕ್ಷಿಸುವ ದೃಢವಾದ ಬದ್ಧತೆ ಅಗತ್ಯವಿದೆ ಎಂದು ವನತಾರಾ ನಂಬುತ್ತದೆ.

ಗೌರವಾನ್ವಿತ ಸುಪ್ರೀಂ ಕೋರ್ಟ್, ಗೌರವಾನ್ವಿತ ಬಾಂಬೆ ಹೈಕೋರ್ಟ್ ಮತ್ತು ಎಚ್‌ಪಿಸಿಯ (HPC) ನಿರ್ದೇಶನಗಳಿಗೆ ವನತಾರಾ ಕೃತಜ್ಞವಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರಗಳು ಹಾಗೂ ಅವುಗಳ ಅಧಿಕಾರಿಗಳ ಬೆಂಬಲಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮಾಧುರಿಯ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ನಾವು ಮಠಕ್ಕೆ ಮತ್ತು ಕೊಲ್ಹಾಪುರದ ಜನರಿಗೆ ಸಮಾನವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮಾಧುರಿಯ ಸ್ಥಿತಿಯನ್ನು ಎಚ್‌ಪಿಸಿಯ ಮುಂದೆ ತರುವಲ್ಲಿ ಪೆಟಾ ಇಂಡಿಯಾ (PETA India) ವಹಿಸಿದ ಪಾತ್ರವನ್ನು ನಾವು ಗುರುತಿಸುತ್ತೇವೆ ಮತ್ತು ಪ್ರಾಣಿ ಕಲ್ಯಾಣದ ನಿಟ್ಟಿನಲ್ಲಿ ನಮ್ಮ ದೀರ್ಘಕಾಲದ ಒಡನಾಟಕ್ಕೆ ಗೌರವ ನೀಡುತ್ತೇವೆ.

ಮಾಧುರಿಯ ಯೋಗಕ್ಷೇಮವು ಯಾವಾಗಲೂ ವನತಾರಾದ ಆದ್ಯತೆ ಕಾಳಜಿಯಾಗಿದೆ. ಆಕೆಯ ಆರೋಗ್ಯ, ಒಳಿತು ಮತ್ತು ಘನತೆಯ ಬಗ್ಗೆ ನಮ್ಮ ಬದ್ಧತೆಯು ಮಾಧುರಿ ಎಲ್ಲಿ ವಾಸಿಸುತ್ತಾಳೆ ಎಂಬುದರ ಮೇಲೆ ಅವಲಂಬಿಸಿಲ್ಲ. ಆಕೆ ಉತ್ತಮ ಆರೋಗ್ಯ, ದೀರ್ಘಕಾಲದ, ಸುರಕ್ಷಿತ ಮತ್ತು ಸಂತೋಷದ ಜೀವನವನ್ನು ನಡೆಸಲಿ ಎಂದು ನಾವು ಹಾರೈಸುತ್ತೇವೆ.