SK Home Ad
Home ಸುದ್ದಿ ದೇಶ ‘ಸಾರ್ಥಕ್-ಪಿಡಿಎಸ್’ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

‘ಸಾರ್ಥಕ್-ಪಿಡಿಎಸ್’ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

0
99
ಸಾಂದರ್ಭಿಕ ಚಿತ್ರ

ನ್ಯಾಯಬೆಲೆ ಅಂಗಡಿಗಳ ವ್ಯವಸ್ಥೆ Digital: ಪಿಡಿಎಸ್ ಆಧುನೀಕರಣಕ್ಕೆ ಕೇಂದ್ರದ ಮಹತ್ವದ ಹೆಜ್ಜೆ

ನವದೆಹಲಿ: ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS)ಯನ್ನು ಮತ್ತಷ್ಟು ಬಲಪಡಿಸಿ ಆಧುನೀಕರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಯೋಜನೆಗೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ‘ಸಾರ್ಥಕ್-ಪಿಡಿಎಸ್’ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಅಶ್ವಿನಿ ವೈಷ್ಣವ್, ಮುಂದಿನ ಐದು ವರ್ಷಗಳ ಅವಧಿಗೆ ಯೋಜನೆ ಜಾರಿಯಾಗಲಿದ್ದು, ಕೇಂದ್ರ ಸರ್ಕಾರ ₹25,530 ಕೋಟಿ ಅನುದಾನ ಮೀಸಲಿಟ್ಟಿದೆ ಎಂದು ತಿಳಿಸಿದ್ದಾರೆ.

80 ಕೋಟಿ ಜನರಿಗೆ ನೇರ ಪ್ರಯೋಜನ : ಸರ್ಕಾರದ ಪ್ರಕಾರ, ಈ ಯೋಜನೆ ದೇಶದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ನೆರವಾಗಲಿದೆ. “ಪ್ರತಿ ತಿಂಗಳು ಸುಮಾರು 80 ಕೋಟಿ ನಾಗರಿಕರಿಗೆ ಮೂಲಭೂತ ಪಡಿತರ ಒದಗಿಸುವ ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಯೋಜನೆಯನ್ನು ಭಾರತ ನಡೆಸುತ್ತಿದೆ. ಸಾರ್ಥಕ್-ಪಿಡಿಎಸ್ ಯೋಜನೆ ಈ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿ ಮಾಡಲಿದೆ” ಎಂದು ವೈಷ್ಣವ್ ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಪ್ರಶ್ನೆಯೇ ಇಲ್ಲ: ಸಚಿವ ಪಾಟೀಲ್ ಖಡಕ್ ಪ್ರತಿಕ್ರಿಯೆ

2026 ರಿಂದ 2031ರವರೆಗೆ ಜಾರಿ : ಈ ಯೋಜನೆಯನ್ನು 16ನೇ ಹಣಕಾಸು ಆಯೋಗದ ಅವಧಿಗೆ ಅನುಗುಣವಾಗಿ ಏಪ್ರಿಲ್ 2026ರಿಂದ ಮಾರ್ಚ್ 2031ರವರೆಗೆ ಜಾರಿಗೆ ತರಲಾಗುತ್ತದೆ.

ಯೋಜನೆಯ ಪ್ರಮುಖ ಉದ್ದೇಶಗಳು: ಆಹಾರ ಧಾನ್ಯಗಳ ಸಾಗಣೆ ವ್ಯವಸ್ಥೆ ಸುಧಾರಣೆ, ಪೂರೈಕೆ ಸರಪಳಿ ಬಲಪಡಿಸುವುದು, ತಂತ್ರಜ್ಞಾನ ಆಧಾರಿತ ಪಡಿತರ ವಿತರಣೆ, ರಾಜ್ಯ ಸರ್ಕಾರಗಳ ಆರ್ಥಿಕ ಹೊರೆ ಕಡಿಮೆ ಮಾಡುವುದು. ರಾಜ್ಯಗಳಿಗೆ ಸಾಗಣೆ ವೆಚ್ಚದಲ್ಲಿ ನೆರವು ಮತ್ತು ಪ್ರಸ್ತುತ ಭಾರತೀಯ ಆಹಾರ ನಿಗಮ (FCI) ಗೋದಾಮುಗಳಿಂದ ಜಿಲ್ಲೆಗಳು ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ಸಾಗಿಸುವಲ್ಲಿ ರಾಜ್ಯ ಸರ್ಕಾರಗಳು ಹೆಚ್ಚಿನ ವೆಚ್ಚ ಭರಿಸುತ್ತಿವೆ.

ಈ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ನೇರ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ. “ರಾಜ್ಯ ಸಂಸ್ಥೆಗಳು ಸಾಗಣೆ ವೆಚ್ಚದ ಹೊರೆ ಎದುರಿಸುತ್ತಿದ್ದವು. ಈಗ ಆ ವೆಚ್ಚವನ್ನು ಕೇಂದ್ರ ಸರ್ಕಾರ ಬೆಂಬಲಿಸಲಿದೆ” ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ವದಂತಿಗಳಿಗೆ ಕಿವಿಗೊಡಬೇಡಿ: ಎಬೋಲಾ ಕುರಿತು ಆರೋಗ್ಯ ಇಲಾಖೆಯ ಸ್ಪಷ್ಟ ಸಂದೇಶ

‘ನಿರ್ಮಲ್’, ‘ಆಶಾ’, ‘ಸಕ್ಷಮ್’ – ಮೂರು ಪ್ರಮುಖ ಘಟಕಗಳು : ಸಾರ್ಥಕ್-ಪಿಡಿಎಸ್ ಯೋಜನೆಯಲ್ಲಿ ಮೂರು ಪ್ರಮುಖ ತಂತ್ರಜ್ಞಾನ ಆಧಾರಿತ ಘಟಕಗಳನ್ನು ಪರಿಚಯಿಸಲಾಗಿದೆ.

  1. ನಿರ್ಮಲ್ : ‘ನಿರ್ಮಲ್’ ಯೋಜನೆಯಡಿ ಫಲಾನುಭವಿಗಳ ನೋಂದಣಿಯನ್ನು ತಂತ್ರಜ್ಞಾನ ಆಧಾರಿತವಾಗಿ ನಿಖರಗೊಳಿಸಲಾಗುತ್ತದೆ. AI ಬಳಸಿ ಅರ್ಹ ಫಲಾನುಭವಿಗಳಿಗೆ ಮಾತ್ರ ಪಡಿತರ ಸೌಲಭ್ಯ ತಲುಪುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ. “ಸರಿಯಾದ ವ್ಯಕ್ತಿಗೆ ಲಾಭ ಸಿಗಬೇಕು, ತಪ್ಪು ವ್ಯಕ್ತಿಗೆ ಸಿಗಬಾರದು ಎಂಬುದೇ ಉದ್ದೇಶ” ಎಂದು ವೈಷ್ಣವ್ ಹೇಳಿದರು.
  2. ಆಶಾ : ‘ಆಶಾ’ ಯೋಜನೆಯಡಿ AI ಆಧಾರಿತ ದೂರು ಪರಿಹಾರ ಮತ್ತು ಪ್ರತಿಕ್ರಿಯೆ ವ್ಯವಸ್ಥೆ ರೂಪಿಸಲಾಗುತ್ತದೆ. ಸರ್ಕಾರ ಈಗಾಗಲೇ ತಿಂಗಳಿಗೆ ಸುಮಾರು 2 ಲಕ್ಷ ಕರೆಗಳ ಮೂಲಕ ಫಲಾನುಭವಿಗಳ ಪ್ರತಿಕ್ರಿಯೆ ಸಂಗ್ರಹಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
  3. ಸಕ್ಷಮ್ : ‘ಸಕ್ಷಮ್’ ಘಟಕದಡಿ ಸಂಪೂರ್ಣ ಆಹಾರ ಧಾನ್ಯ ಪೂರೈಕೆ ಸರಪಳಿಯನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ. ಪ್ರತಿಯೊಂದು ಪಡಿತರ ಚೀಲಕ್ಕೂ QR ಕೋಡ್, ಸಾಗಣೆ ವಾಹನಗಳಿಗೆ GPS ಟ್ರ್ಯಾಕಿಂಗ್, ಡಿಜಿಟಲ್ ಡ್ಯಾಶ್‌ಬೋರ್ಡ್ ಮೂಲಕ ಮೇಲ್ವಿಚಾರಣೆ ಇವುಗಳ ಮೂಲಕ ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ.

ಇದನ್ನೂ ಓದಿ: ಕೋಚಿಂಗ್ ಸೆಂಟರ್ ಜಾಲ ಬಯಲು?: NEET ಪ್ರಕರಣದಲ್ಲಿ CBI ಭರ್ಜರಿ ಆ್ಯಕ್ಷನ್

AI ಮತ್ತು ಡಿಜಿಟಲ್ ಮೇಲ್ವಿಚಾರಣೆಗೆ ಒತ್ತು: ಕೃತಕ ಬುದ್ಧಿಮತ್ತೆ (AI) ಬಳಸಿ ಫಲಾನುಭವಿಗಳ ಪರಿಶೀಲನೆ, ದೂರು ನಿರ್ವಹಣೆ ಹಾಗೂ ವಿತರಣಾ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಯೋಜಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯದೊಂದಿಗೆ ಪಿಡಿಎಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಲಾಗಿದೆ.

ಪಾರದರ್ಶಕ ಮತ್ತು ಸುಸ್ಥಿರ ಪಿಡಿಎಸ್ ವ್ಯವಸ್ಥೆ : ಕೇಂದ್ರ ಸರ್ಕಾರದ ಪ್ರಕಾರ, ಈ ಯೋಜನೆಯಿಂದ ಪಡಿತರ ಸೋರಿಕೆ ಕಡಿಮೆಯಾಗುವುದು, ಅರ್ಹರಿಗೆ ಸರಿಯಾದ ಸಮಯದಲ್ಲಿ ಆಹಾರ ಧಾನ್ಯ ತಲುಪುವುದು ಮತ್ತು ವಿತರಣಾ ವ್ಯವಸ್ಥೆಯ ಮೇಲೆ ಸಾರ್ವಜನಿಕ ನಂಬಿಕೆ ಹೆಚ್ಚುವುದು ಎಂಬ ನಿರೀಕ್ಷೆಯಿದೆ.