ಇರಾನ್ನಲ್ಲಿ ಹೆಚ್ಚುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ತುರ್ತು ಎಚ್ಚರಿಕೆ ನೀಡಿದ್ದು, ದೇಶವನ್ನು “ತಕ್ಷಣ ತೊರೆಯುವಂತೆ” ಸೂಚಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆ ನಡೆದಿದ್ದರೂ, ನೆಲಮಟ್ಟದ ಪರಿಸ್ಥಿತಿ ಇನ್ನೂ ಸ್ಥಿರವಾಗಿಲ್ಲ ಎಂಬ ಅಂದಾಜಿನ ಹಿನ್ನೆಲೆ ಈ ಸಲಹೆ ನೀಡಲಾಗಿದೆ ಎನ್ನಲಾಗುತ್ತಿದೆ.
ಭಾರತೀಯ ರಾಯಭಾರ ಕಚೇರಿ (Embassy of India in Tehran) ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ, ಇರಾನ್ನಲ್ಲಿರುವ ಭಾರತೀಯರು ರಾಯಭಾರ ಕಚೇರಿಯ ಮಾರ್ಗದರ್ಶನದಲ್ಲಿ ಮಾತ್ರ ದೇಶ ತೊರೆಯಬೇಕು ಎಂದು ಸೂಚಿಸಲಾಗಿದೆ. ಯಾವುದೇ ಅಂತರರಾಷ್ಟ್ರೀಯ ಭೂ ಗಡಿಗಳನ್ನು ಸ್ವಯಂ ಪ್ರಯತ್ನದಿಂದ ದಾಟಬಾರದು ಎಂದು ಕೂಡ ಎಚ್ಚರಿಕೆ ನೀಡಲಾಗಿದೆ.
ಇದಕ್ಕೂ ಮೊದಲು, 07 ರಂದು ಭಾರತೀಯ ಪ್ರಜೆಗಳು 48 ಗಂಟೆಗಳ ಕಾಲ ತಮ್ಮ ಇರುವ ಸ್ಥಳದಲ್ಲೇ ಉಳಿದುಕೊಳ್ಳಬೇಕು ಮತ್ತು ಅನಾವಶ್ಯಕವಾಗಿ ಹೊರಗೆ ಹೋಗಬಾರದು ಎಂದು ಸೂಚಿಸಲಾಗಿತ್ತು. ಈಗಿನ ಹೊಸ ಸಲಹೆಯಲ್ಲಿ, ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ತಕ್ಷಣ ನಿರ್ಗಮನದ ಮೇಲೆ ಹೆಚ್ಚು ಒತ್ತಡ ನೀಡಲಾಗಿದೆ.
ರಾಯಭಾರ ಕಚೇರಿ ಸೂಚನೆಗಳು: ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲೇ ಇರಬೇಕು ಹಾಗೂ ಸೂಚಿಸಲಾದ ಮಾರ್ಗಗಳ ಮೂಲಕ ಮಾತ್ರ ನಿರ್ಗಮನ ಮಾಡಬೇಕು ಮತ್ತು ಸ್ವಯಂವಾಗಿ ಗಡಿಭಾಗಗಳತ್ತ ತೆರಳಬಾರದು ಹಾಗೂ ತುರ್ತು ಸಹಾಯಕ್ಕಾಗಿ ನೀಡಿರುವ ಸಂಖ್ಯೆಗಳ ಬಳಕೆ ಮಾಡಬೇಕು ಎಂದು ತಿಳಿಸಿದೆ.























