ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಸಮಯ ಕೋರಿದ್ದೆ. ಬುಧವಾರ ಸಮಯ ನೀಡಿದ್ದರು. ಹೀಗಾಗಿ ಭೇಟಿ ಮಾಡಿದ್ದೆ. ಇದೊಂದು ಸಹಜ ಭೇಟಿಯಷ್ಟೇ. ಬೇರೆ ಏನೂ ವಿಶೇಷ ಇಲ್ಲ ಎಂದು ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಸಂಯುಕ್ತ ಕರ್ನಾಟಕ ಮಾತನಾಡಿಸಿದಾಗ, ಇದೊಂದು ಸಹಜ ಭೇಟಿಯಾಗಿತ್ತಷ್ಟೇ. ಪಕ್ಷದ ಹಿರಿಯರು ಹೀಗಾಗಿ ಭೇಟಿ ಮಾಡಿದ್ದೆಯಷ್ಟೇ ಎಂದರು.
ಕೇಂದ್ರ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದಾಗ, ಲೋಕಸಭೆ ಆಧಿವೇಶನ ಮುಕ್ತಾಯವಾದ ಬಳಿಕ ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಅಧಿವೇಶನ ಮುಗಿಯುವವರೆಗೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಹೇಳಿದರು.





















