SK Home Ad
Home ತಾಜಾ ಸುದ್ದಿ ಮಠದಲ್ಲೇ ಹಾಲಸ್ವಾಮಿ ವಿಚಾರಣೆ

ಮಠದಲ್ಲೇ ಹಾಲಸ್ವಾಮಿ ವಿಚಾರಣೆ

0
174

ಹೂವಿನಹಡಗಲಿ: ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಸ್ವಾಮಿಗಳನ್ನು ಸ್ಥಳ ಮಹಜರ್ ನಡೆಸಲು ಬುಧವಾರ ತಡರಾತ್ರಿ ಹಾಲಸ್ವಾಮಿ ಮಠಕ್ಕೆ ಕರೆತರಲಾಯಿತು.
ಸಿಸಿಬಿ ಇನ್ಸ್‌ಪೆಕ್ಟರ್ ಚಂದ್ರಪ್ಪ ಬಾರ್ಕಿ ನೇತೃತ್ವದ ತಂಡ ಸ್ವಾಮೀಜಿಗಳನ್ನು ಕರೆ ತಂದಾಗ ಮಠದ ಭಕ್ತಾದಿಗಳು ಸ್ವಾಮಿಗಳ ಕಾಲಿಗೆ ನೀರು ಹಾಕುವ ಮೂಲಕ ಮತ್ತು ಇಡುಗಾಯಿಯನ್ನು ಒಡೆದು ಬರಮಾಡಿಕೊಂಡರು. ನಂತರ ಮಠದ ಬಾಗಿಲನ್ನು ಮುಚ್ಚಿ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದರು.