ಪಂ. ಎಂ. ವೆಂಕಟೇಶಕುಮಾರ್ ಈಗ ರಾಜ್ಯ “ಸಂಗೀತ ವಿದ್ವಾನ್”

0
43

ಮೈಸೂರು: ಹಿಂದೂಸ್ತಾನಿ ಗಾಯಕ ಪಂಡಿತ ಎಂ. ವೆಂಕಟೇಶ್ ಕುಮಾರ್​ಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರದಿಂದ ಘೋಷಿತ ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 22ರಂದು ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಅರಮನೆ ಮುಂಭಾಗದಲ್ಲಿ ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿಯಲ್ಲಿ ಐದು ಲಕ್ಷ ರೂ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಸೇರಿದೆ.

ಪ್ರತಿ ವರ್ಷ ನಾಡ ಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿನ ಅರಮನೆಯ ಮುಂಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಸಂಗೀತ ವಿದ್ವಾನ್ ಪ್ರಶಸ್ತಿ ಇದಾಗಿದೆ. ರಾಜ್ಯ ಸರ್ಕಾರ ಶನಿವಾರ ಈ ಪ್ರಶಸ್ತಿ ಘೋಷಣೆ ಮಾಡಿದೆ. ಪಂಡಿತ ವೆಂಕಟೇಶ್ ಕುಮಾರ್​ ಅವರು ಹಿಂದೂಸ್ತಾನಿ ಸಂಗೀತದಲ್ಲಿ ದೇಶಾದ್ಯಂತ ಖ್ಯಾತಿ ಗಳಿಸಿದ್ದಾರೆ.

   ಈವರೆವಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪಡೆದ ಗಣ್ಯರು ಈ ಕೆಳಕಂಡಂತಿದ್ದಾರೆ.

1.            ಡಾ|| ಪುಟ್ಟರಾಜ ಗವಾಯಿ         1993

2.            ವಿದ್ವಾನ್ ಆರ್.ಕೆ. ಶ್ರೀಕಂಠನ್   1994

3.            ಪಂಡಿತ್ ರಾಮರಾವ್ ವಿ. ನಾಯಕ್        1995

4.            ಶ್ರೀ ಎ. ಸುಬ್ಬರಾವ್        1996

5.            ಶ್ರೀ ಸಂಗಮೇಶ್ವರ ಗುರುವ            1997

6.            ಶ್ರೀಮತಿ ಎನ್. ಚೊಕ್ಕಮ್ಮ           1998

7.            ಶ್ರೀ ಎಂ.ಎ. ನರಸಿಂಹಾಚಾರ್    1999

8.            ಶ್ರೀ ಟಿ.ಎಸ್. ತಾತಾಚಾರ್             2000

9.            ಶ್ರೀ ಆರ್. ಕೆ. ಬಿಜಾಪುರೆ 2001

10.          ಶ್ರೀ ಆರ್. ವಿಶ್ವೇಶ್ವರನ್  2002

11.          ಶ್ರೀ ಆರ್. ವಿಶ್ವೇಶ್ವರನ್  2003

12.          ಪಂಡಿತ್ ಚಂದ್ರಶೇಖರ ಪುರಾಣಿಕ್ ಮಠ               2004

13.          ವಿದ್ವಾನ್ ಎಸ್. ಮಹದೇವಪ್ಪ  2005

14.          ಪಂಡಿತ್ ಮಾಣಿಕರಾವ್ ರಾಯಚೂರ್‌ಕರ್        2006

15.          ಪಂಡಿತ್ ಸಿದ್ಧರಾಮಸ್ವಾಮಿ ಕೋರವಾರ್            2007

16.          ಡಾ|| ಎಂ. ಆರ್. ಗೌತಮ್, ಸಿಕಂದರಾಬಾದ್     2008

17.          ಶ್ರೀ ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು           2009

18.          ಪಂಡಿತ್ ಶೇಷಗಿರಿ ಹಾನಗಲ್, ಧಾರವಾಡ            2010

19.          ರಾ. ಸತ್ಯನಾರಾಯಣ, ಮೈಸೂರು           2011

20.          ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಧಾರವಾಡ       2012

21.          ಡಾ|| ವಿ.ಎಸ್. ಸಂಪತ್ಕುಮಾರಾಚಾರ್ಯ           2013

22.          ಪಂ. ಇಂದೂಧರ ನಿರೋಡಿ, ಮೈಸೂರು               2014

23.          ಶ್ರೀ ವಿ.ಎಸ್. ರಾಜಗೋಪಾಲ್, ಬೆಂಗಳೂರು        2015

24.          ಶ್ರೀ ಸೋಮನಾಥ ಮರಡೂರ, ಧಾರವಾಡ           2016

25.          ಶ್ರೀಮತಿ ಎ. ರಾಜಮ್ಮ ಕೇಶವಮೂರ್ತಿ, ಬೆಂಗಳೂರು 2017

26.          ಪಂಡಿತ್ ರಾಜೀವ್ ತಾರಾನಾಥ್, ಬೆಂಗಳೂರು    2018

27.          ಪ್ರೊ. ಬಿ.ಎಸ್. ವಿಜಯರಾಘವನ್, ಮೈಸೂರು   2019

28.          ಪಂಡಿತ್‌ ವಿನಾಯಕ ತೊರವಿ,ಧಾರವಾಡ.          2020

29.          ಶ್ರೀ ಎ.ವಿ. ಆನಂದ್‌, ಬೆಂಗಳೂರು             2021

30.          ಶ್ರೀಮತಿ ಲಲಿತ್‌. ಜೆ. ರಾವ್‌, ಬೆಂಗಳೂರು               2022

31           ಡಾ. ಪದ್ಮಾ ಮೂರ್ತಿ     2023

32         ಪಂಡಿತ ಬಸವರಾಜ ಭಜಂತ್ರಿ 2024

33        ಪಂಡಿತ್ ಎಂ. ವೆಂಕಟೇಶಕುಮಾರ್ 2025

Previous articleಗ್ರೇಟರ್ ಬೆಂಗಳೂರು ವ್ಯಾಪ್ತಿಗೂ ಬಿಎಂಟಿಸಿ ಬಸ್ ಸೇವೆ: ಸರ್ಕಾರದ ಆದೇಶ
Next articleದಾವಣಗೆರೆ: DJ ಇಲ್ಲದೆ ಇದ್ರು ಮಹಾಗಣಪನಿಗೆ ಅದ್ಧೂರಿ ವಿದಾಯ

LEAVE A REPLY

Please enter your comment!
Please enter your name here