ಮೈಸೂರು: ಹಿಂದೂಸ್ತಾನಿ ಗಾಯಕ ಪಂಡಿತ ಎಂ. ವೆಂಕಟೇಶ್ ಕುಮಾರ್ಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರದಿಂದ ಘೋಷಿತ ಈ ಪ್ರಶಸ್ತಿಯನ್ನು ಸೆಪ್ಟೆಂಬರ್ 22ರಂದು ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಅರಮನೆ ಮುಂಭಾಗದಲ್ಲಿ ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿಯಲ್ಲಿ ಐದು ಲಕ್ಷ ರೂ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಸೇರಿದೆ.
ಪ್ರತಿ ವರ್ಷ ನಾಡ ಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿನ ಅರಮನೆಯ ಮುಂಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಸಂಗೀತ ವಿದ್ವಾನ್ ಪ್ರಶಸ್ತಿ ಇದಾಗಿದೆ. ರಾಜ್ಯ ಸರ್ಕಾರ ಶನಿವಾರ ಈ ಪ್ರಶಸ್ತಿ ಘೋಷಣೆ ಮಾಡಿದೆ. ಪಂಡಿತ ವೆಂಕಟೇಶ್ ಕುಮಾರ್ ಅವರು ಹಿಂದೂಸ್ತಾನಿ ಸಂಗೀತದಲ್ಲಿ ದೇಶಾದ್ಯಂತ ಖ್ಯಾತಿ ಗಳಿಸಿದ್ದಾರೆ.
ಈವರೆವಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪಡೆದ ಗಣ್ಯರು ಈ ಕೆಳಕಂಡಂತಿದ್ದಾರೆ.
1. ಡಾ|| ಪುಟ್ಟರಾಜ ಗವಾಯಿ 1993
2. ವಿದ್ವಾನ್ ಆರ್.ಕೆ. ಶ್ರೀಕಂಠನ್ 1994
3. ಪಂಡಿತ್ ರಾಮರಾವ್ ವಿ. ನಾಯಕ್ 1995
4. ಶ್ರೀ ಎ. ಸುಬ್ಬರಾವ್ 1996
5. ಶ್ರೀ ಸಂಗಮೇಶ್ವರ ಗುರುವ 1997
6. ಶ್ರೀಮತಿ ಎನ್. ಚೊಕ್ಕಮ್ಮ 1998
7. ಶ್ರೀ ಎಂ.ಎ. ನರಸಿಂಹಾಚಾರ್ 1999
8. ಶ್ರೀ ಟಿ.ಎಸ್. ತಾತಾಚಾರ್ 2000
9. ಶ್ರೀ ಆರ್. ಕೆ. ಬಿಜಾಪುರೆ 2001
10. ಶ್ರೀ ಆರ್. ವಿಶ್ವೇಶ್ವರನ್ 2002
11. ಶ್ರೀ ಆರ್. ವಿಶ್ವೇಶ್ವರನ್ 2003
12. ಪಂಡಿತ್ ಚಂದ್ರಶೇಖರ ಪುರಾಣಿಕ್ ಮಠ 2004
13. ವಿದ್ವಾನ್ ಎಸ್. ಮಹದೇವಪ್ಪ 2005
14. ಪಂಡಿತ್ ಮಾಣಿಕರಾವ್ ರಾಯಚೂರ್ಕರ್ 2006
15. ಪಂಡಿತ್ ಸಿದ್ಧರಾಮಸ್ವಾಮಿ ಕೋರವಾರ್ 2007
16. ಡಾ|| ಎಂ. ಆರ್. ಗೌತಮ್, ಸಿಕಂದರಾಬಾದ್ 2008
17. ಶ್ರೀ ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು 2009
18. ಪಂಡಿತ್ ಶೇಷಗಿರಿ ಹಾನಗಲ್, ಧಾರವಾಡ 2010
19. ರಾ. ಸತ್ಯನಾರಾಯಣ, ಮೈಸೂರು 2011
20. ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಧಾರವಾಡ 2012
21. ಡಾ|| ವಿ.ಎಸ್. ಸಂಪತ್ಕುಮಾರಾಚಾರ್ಯ 2013
22. ಪಂ. ಇಂದೂಧರ ನಿರೋಡಿ, ಮೈಸೂರು 2014
23. ಶ್ರೀ ವಿ.ಎಸ್. ರಾಜಗೋಪಾಲ್, ಬೆಂಗಳೂರು 2015
24. ಶ್ರೀ ಸೋಮನಾಥ ಮರಡೂರ, ಧಾರವಾಡ 2016
25. ಶ್ರೀಮತಿ ಎ. ರಾಜಮ್ಮ ಕೇಶವಮೂರ್ತಿ, ಬೆಂಗಳೂರು 2017
26. ಪಂಡಿತ್ ರಾಜೀವ್ ತಾರಾನಾಥ್, ಬೆಂಗಳೂರು 2018
27. ಪ್ರೊ. ಬಿ.ಎಸ್. ವಿಜಯರಾಘವನ್, ಮೈಸೂರು 2019
28. ಪಂಡಿತ್ ವಿನಾಯಕ ತೊರವಿ,ಧಾರವಾಡ. 2020
29. ಶ್ರೀ ಎ.ವಿ. ಆನಂದ್, ಬೆಂಗಳೂರು 2021
30. ಶ್ರೀಮತಿ ಲಲಿತ್. ಜೆ. ರಾವ್, ಬೆಂಗಳೂರು 2022
31 ಡಾ. ಪದ್ಮಾ ಮೂರ್ತಿ 2023
32 ಪಂಡಿತ ಬಸವರಾಜ ಭಜಂತ್ರಿ 2024
33 ಪಂಡಿತ್ ಎಂ. ವೆಂಕಟೇಶಕುಮಾರ್ 2025