ಕಲಬುರಗಿ: ಜಾತಿವಾರು ಜನಗಣತಿ ಜಾರಿ ಮಾಡುವ ಅಧಿಕಾರಕ್ಕೆ ರಾಜ್ಯ ಸರ್ಕಾರಕ್ಕೆ ಬಿಟ್ಟದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಪ್ರತಿಯೊಂದು ರಾಜ್ಯದಲ್ಲಿ ಅವರು ಅವರು ಜಾತಿವಾರು ಜನಗಣತಿ ಮಾಡ್ತಾರೆ. ಇದು ಕೇಂದ್ರ ಸರ್ಕಾರದಿಂದ ಮಾಡಿರುವುದಲ್ಲ. ರಾಜ್ಯದ ಸಚಿವ ಸಂಪುಟದಲ್ಲಿ ಏನ್ ಹೊರಗೆ ಬರುತ್ತೆ ನೋಡಬೇಕು.
ಆ ರಿಪೋರ್ಟ್ ಕೂಡ ನಾನು ನೋಡಿಲ್ಲ, ಜಾತಿಗಣತಿಗೆ ಹಲವರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯ ನಾನು ಹೇಳಿದ್ದೆನೆ ಅಷ್ಟೇ ಎಂದರು.