SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಅಸಮಾಧಾನ ಎರಡು ದಿನ, ಬಳಿಕ ಎಲ್ಲವೂ ಸರಿಹೋಗುತ್ತೆ

ಅಸಮಾಧಾನ ಎರಡು ದಿನ, ಬಳಿಕ ಎಲ್ಲವೂ ಸರಿಹೋಗುತ್ತೆ

0
71

ಕೊಪ್ಪಳ: ಎಲ್ಲ ಜಾತಿಗಳಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಕಳೆದ ಸಂಪುಟದಲ್ಲಿ ಬ್ರಾಹ್ಮಣ ಸಮಾಜದ ದಿನೇಶ ಗುಂಡೂರಾವ್‌ಗೆ ನೀಡಲಾಗಿತ್ತು. ಆಗ ನನಗೂ ನೀಡಿರಲಿಲ್ಲ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಕೊಪ್ಪಳದಲ್ಲಿ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ರಾಜ್ಯದಲ್ಲಿ 3 ಸಾವಿರ ಜಾತಿಗಳಿವೆ. ಎಲ್ಲ ಜಾತಿಗಳಿಗೆ ಸಚಿವ ಸ್ಥಾನ ನೀಡಿದರೆ, 3000 ಜನ ಸಚಿವರಾಗುತ್ತಾರೆ. ಹಾಗಾಗಿ ಜಾತಿಯ ಆಧಾರದ ಮೇಲೆಯೇ ಸಚಿವ ಸ್ಥಾನ ನೀಡಲು ಆಗುವುದಿಲ್ಲ ಎಂದರು.

ಶಾಸಕರು ಅಸಮಾಧಾನಗೊಂಡಿದ್ದಾರೆ. ಅಧಿಕಾರ ಎಲ್ಲರಿಗೂ ಬೇಕು. ಇದು ತಪ್ಪಲ್ಲ. 33 ಸಚಿವರಿಗಿಂತಲೂ ಹೆಚ್ಚು ಮಾಡಲು ಬರುವುದಿಲ್ಲ. ಎರಡು ದಿನ ಅಸಮಾಧಾನ ಇರುತ್ತದೆ. ಬಳಿಕ ಎಲ್ಲವೂ ಸರಿಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.