ಬೆಂಗಳೂರು: ಐಪಿಎಲ್ ಫೈನಲ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸಲನೂ ಕಪ್ ಗೆಲ್ಲಲಿ ಎಂದು ಭಾವಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಭಕೋರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಹಾಲಿ ಚಾಂಪಿಯನ್ಗಳೇ, ಶುಭವಾಗಲಿ! ಇದು ಆರ್ಸಿಬಿ ಹೊಸ ಅಧ್ಯಾಯ.”
“ಮೊದಲ ಪಂದ್ಯದಿಂದ ಫೈನಲ್ವರೆಗೆ, ಆರ್ಸಿಬಿ ತನ್ನ ದೃಢನಿಶ್ಚಯ, ಶಿಸ್ತು ಮತ್ತು ಅಸಾಧಾರಣ ತಂಡದ ಕೆಲಸವನ್ನು ಪ್ರದರ್ಶಿಸಿದೆ. ತಂಡವು ಮತ್ತೊಮ್ಮೆ ಬೆಂಗಳೂರನ್ನು ಹೆಮ್ಮೆಪಡುವಂತೆ ಮಾಡಿದೆ ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಭರವಸೆ ಮತ್ತು ಆಚರಣೆಯಲ್ಲಿ ಒಂದುಗೂಡಿಸಿದೆ.”
“IPLFinal2026 ಗಾಗಿ ಶುಭ ಹಾರೈಸುತ್ತೇನೆ. ಇಂದಿನ ಪಂದ್ಯವು ನಮ್ಮ ಬೆಂಗಳೂರಿಗೆ ಮತ್ತೊಂದು ಅದ್ಭುತ ವಿಜಯದೊಂದಿಗೆ ಕೊನೆಗೊಳ್ಳಲಿ ಮತ್ತು ಕರ್ನಾಟಕದಾದ್ಯಂತ ಕ್ರಿಕೆಟ್ ಪ್ರಿಯರಿಗೆ ಸಂತೋಷವನ್ನು ತರಲಿ.” ಎಂದು ಅವರು ಬರೆದುಕೊಂಡಿದ್ದಾರೆ.






















