SK Home Ad
Home ತಾಜಾ ಸುದ್ದಿ ಭಾಷಣ ತುಣುಕುಗಳನ್ನು ತೆಗೆದಿದ್ದಕ್ಕೆ ಖರ್ಗೆ ಆಕ್ಷೇಪ

ಭಾಷಣ ತುಣುಕುಗಳನ್ನು ತೆಗೆದಿದ್ದಕ್ಕೆ ಖರ್ಗೆ ಆಕ್ಷೇಪ

0
104

ನವದೆಹಲಿ: ರಾಜ್ಯಸಭೆಯಲ್ಲಿ ತಮ್ಮ ಭಾಷಣದ ಕೆಲವು ತುಣುಕುಗಳನ್ನು ತೆಗೆದು ಹಾಕಿದ್ದಕ್ಕೆ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ತಮ್ಮ ಭಾಷಣದ ಕೆಲವು ಭಾಗಗಳನ್ನು ಕಲಾಪದಿಂದ ತೆಗೆದುಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಯಾವುದೇ ಮುಖ್ಯಮಂತ್ರಿಯ ಹೆಸರನ್ನು ಅಥವಾ ರಾಜ್ಯದ ಹೆಸರನ್ನು ತೆಗೆದುಕೊಳ್ಳಲಿಲ್ಲ, ಕಲಾಪದಿಂದ ಭಾಗಗಳನ್ನು ಅಳಿಸುವುದರಿಂದ ಕೆಲವೊಮ್ಮೆ ಅರ್ಥ ಕಳೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಸುಮಾರು ಎರಡು ಪುಟಗಳನ್ನು ಕಲಾಪದಿಂದ ತೆಗೆದುಹಾಕಲಾಗಿದೆ… ಸದನದ ಕಲಾಪದಿಂದ ತೆಗೆದುಹಾಕಿರುವ ಭಾಗಗಳನ್ನು ನಾನು ತೀವ್ರವಾಗಿ ಆಕ್ಷೇಪಿಸುತ್ತೇನೆ ಮತ್ತು ಅವುಗಳನ್ನು ಕಲಾಪದಲ್ಲಿ ಮರುಸ್ಥಾಪಿಸಲು ವಿನಂತಿಸುತ್ತೇನೆ ಎಂದಿದ್ದಾರೆ.