SK Home Ad
Home ತಾಜಾ ಸುದ್ದಿ ಆತ್ಮಗೌರವಕ್ಕಾಗಿ ಶೆಟ್ಟರ ಕಾಂಗ್ರೆಸ್ ಸೇರ್ಪಡೆ, ಆಫರ್ ಕೊಟ್ಟಿಲ್ಲ

ಆತ್ಮಗೌರವಕ್ಕಾಗಿ ಶೆಟ್ಟರ ಕಾಂಗ್ರೆಸ್ ಸೇರ್ಪಡೆ, ಆಫರ್ ಕೊಟ್ಟಿಲ್ಲ

0
208
DKC

ಹುಬ್ಬಳ್ಳಿ : ಜಗದೀಶ ಶೆಟ್ಟರ ಅವರು ಆತ್ಮಗೌರವಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರಿಗೆ ಯಾವ ಆಫರ್ ಕೊಟ್ಟಿಲ್ಲ. ಅವರೂ ಏನು ಕೇಳಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಭಿಮಾನಕ್ಕೊಸ್ಕರ, ರಾಜ್ಯದಲ್ಲಿ ಬದಲಾವಣೆ ತರಲು ಬರುತ್ತಿದ್ದಾರೆ. ಖಂಡಿತ ಬಹಳ ಜನ ಕಾಂಗ್ರೆಸ್ ಗೆ ಬರಲಿದ್ದಾರೆ. ಶೆಟ್ಟರ್ ಅವರು ಬೇಷರತ್ತಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಲಿಂಗಾಯತ ಸಮುದಾಯದ ಬಿಜೆಪಿ ನಾಯಕರು ಬಹಳ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಬಾರಿ ಕಾಂಗ್ರೆಸ್ 150 ಸ್ಥಾನಕ್ಕಿಂತ ಹೆಚ್ಚು ಕಡೆ ಗೆಲುವು ಸಾಧಿಸಲಿದೆ. ಯಾವುದೇ ಸಂಶಯ ಬೇಡ ಎಂದು ಡಿ.ಕೆ.ಶಿವಕುಮಾರ ಹೇಳಿದರು.