Home Advertisement
Home ತಾಜಾ ಸುದ್ದಿ ಕೂಡಲ ಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ

ಕೂಡಲ ಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ

0
113

ಬಾಗಲಕೋಟೆ: ಸುಕ್ಷೇತ್ರ ಕೂಡಲಸಂಗಮದಲ್ಲಿ ಶತಮಾನದ ಸಂತ‌ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಅಸ್ಥಿಯನ್ನು ರವಿವಾರ ಬೆಳಗ್ಗೆ ವಿಸರ್ಜಿಸಲಾಯಿತು.

ಮೂರು ನದಿಗಳ ಸಂಗಮವಾಗುವ ಕೂಡಲಸಂಗಮದಲ್ಲಿ ಜ್ಞಾನಾಶ್ರಮದ ಅಧ್ಯಕ್ಷ ಶ್ರೀ ಬಸವಾನಂದ ಶ್ರೀಗಳ ನೇತೃತ್ವದಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು.

ಅಲ್ಲಿಂದ ಗೋಕರ್ಣದತ್ತ ಪ್ರಯಾಣ ಬೆಳೆಸಿರುವ ಚಿತಾಭಸ್ಮ ಹೊತ್ತು ಬಂದಿರುವ ತಂಡ ಇಂದು ಸಂಜೆ ಅಲ್ಲಿನ ಸಮುದ್ರದಲ್ಲೂ ಅಸ್ಥಿಯನ್ನು ವಿಸರ್ಜಿಸಲಿದೆ.