ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ

0
12

ಮಂಗಳೂರು: ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಮಾತೇ ಇಲ್ಲ. ನನ್ನ ಹೆಸರನ್ನು ವಿನಾಕಾರಣ ಈ ಘಟನೆಯಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಮೂಲ್ಕಿ – ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಕಿನ್ನಿಗೋಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದಅವರು, ಸ್ಪೀಕರ್ ಯು. ಟಿ. ಖಾದರ್ ಅವರು ನಮ್ಮಲ್ಲಿ ಮಾತುಕತೆ ಬಗ್ಗೆ ತಿಳಿಸಿ ತಪ್ಪು ಒಪ್ಪಿಕೊಂಡರೆ ೬ ತಿಂಗಳ ಕಾಲದ ನಿಷೇಧವನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ. ಬೇರೆ ಯಾರು ಬೇಕಾದರೂ ತಪ್ಪು ಒಪ್ಪಿಕೊಳ್ಳ, ಬಿಡಲಿ. ಆದರೆ ತಪ್ಪು ಮಾಡದ ನಾನು ಕ್ಷಮೆ ಕೇಳುವುದೇ ಇಲ್ಲ. ಈ ಹಿಂದೆ ಬಿಜೆಪಿ ಸರಕಾರ ಇದ್ದ ಸಂದರ್ಭ ಅಂದಿನ ಸ್ಪೀಕರ್‌ಗೆ ಅಗೌರ ಸಲ್ಲಿಸಿ ಅಪಮಾನ ಮಾಡಿದವರು ಈಗ ದರ್ಪ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.

Previous articleನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ
Next articleದುಂಡಾವರ್ತನೆ ಮುಂದುವರೆದರೆ ಒಂದು ವರ್ಷ ಅಮಾನತು