Home Advertisement
Home ನಮ್ಮ ಜಿಲ್ಲೆ ಕೊಪ್ಪಳ ನೀತಿ ಸಂಹಿತೆ ಜಾರಿ: ಬ್ಯಾನರ್, ಭಿತ್ತಿಪತ್ರ ತೆರವು

ನೀತಿ ಸಂಹಿತೆ ಜಾರಿ: ಬ್ಯಾನರ್, ಭಿತ್ತಿಪತ್ರ ತೆರವು

0
122
ಕೊಪ್ಪಳ

ಕುಷ್ಟಗಿ: ಚುನಾವಣಾ ಆಯೋಗ ಇಂದಿನಿಂದ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ರಾಜಕೀಯ ಪಕ್ಷಗಳ ಬ್ಯಾನರ್ ಬಂಟಿಂಗ್ಸ್, ವಾಲ್ ಪೇಂಟ, ಭಿತ್ತಿಪತ್ರ ಹಾಗೂ ಇನ್ನಿತರ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಚಿತ್ರಗಳನ್ನು ತೆರವುಗೊಳಿಸಲಾಯಿತು.

ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ರಾಜಕೀಯ ಪಕ್ಷಗಳ ಬ್ಯಾನರ್, ಭಿತ್ತಿಪತ್ರ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಆದೇಶ ಹೊರಡಿಸಿದ್ದು, ಪುರಸಭೆ ಪೌರಕಾರ್ಮಿಕರು ತೆರವುಗೊಳಿಸುವ ಕಾರ್ಯಕೈಗೊಂಡರು.