SK Home Ad
Home ಸುದ್ದಿ ರಾಜ್ಯ ಅಭಿಜಾತ ನಟನ ಬದುಕು ಯುವ ಪೀಳಿಗೆಗೆ ಸ್ಫೂರ್ತಿಯಾಗಲಿ: ಸಿಎಂ

ಅಭಿಜಾತ ನಟನ ಬದುಕು ಯುವ ಪೀಳಿಗೆಗೆ ಸ್ಫೂರ್ತಿಯಾಗಲಿ: ಸಿಎಂ

0
45

ಬೆಂಗಳೂರು: “ಕನ್ನಡ ಚಿತ್ರರಂಗದ ಹಿರಿಯ ನಟ, ಅಪ್ರತಿಮ ಕಲಾವಿದರು ಹಾಗೂ ಬಹುಮುಖ ಪ್ರತಿಭೆಯ ಅನಂತ್‌ ನಾಗ್‌ ಅವರಿಗೆ ಭಾರತೀಯ ಸಿನಿಮಾ ರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 2024ನೇ ಸಾಲಿನ ದಾದಾಸಾಹೇಬ್‌ ಪಾಲ್ಕೆ ಪ್ರಶಸ್ತಿ ದೊರೆತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

“ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಅನಂತ್ ನಾಗ್ ಅವರ ಕಲಾಸೇವೆ ಅಪಾರ. ಭಾರತೀಯ ಸಿನಿರಂಗಕ್ಕೆ ಇವರ ಕೊಡುಗೆಗಳನ್ನು ಗುರುತಿಸಿ ಭಾರತ ಸರ್ಕಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿ ಅಭಿಜಾತ ಕಲಾವಿದರನ್ನು ಗೌರವಿಸಿದೆ. ಅನಂತ್‌ ನಾಗ್‌ ಅವರಿಗೆ ನಾಡಿನ‌ ಜನತೆಯ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು. ಅವರ ನಟನೆ, ಕಲಾ ಪಯಣ ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿ” ಎಂದು ಸಿಎಂ ಹಾರೈಸಿದ್ದಾರೆ.