Home Advertisement
Home ತಾಜಾ ಸುದ್ದಿ ಕೇಜ್ರಿವಾಲ್‌ಗೆ ಜೀವ ಬೆದರಿಕೆ: ಮೆಟ್ರೋ ನಿಲ್ದಾಣದಲ್ಲಿ ಸಂದೇಶ ಬರೆದಿದ್ದ ಆರೋಪಿ ಅರೆಸ್ಟ್

ಕೇಜ್ರಿವಾಲ್‌ಗೆ ಜೀವ ಬೆದರಿಕೆ: ಮೆಟ್ರೋ ನಿಲ್ದಾಣದಲ್ಲಿ ಸಂದೇಶ ಬರೆದಿದ್ದ ಆರೋಪಿ ಅರೆಸ್ಟ್

0
117

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊಲೆ ಬೆದರಿಕೆ ಸಂದೇಶ ಬರೆದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಮೆಟ್ರೋ ನಿಲ್ದಾಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊಲೆ ಬೆದರಿಕೆ ಸಂದೇಶ ಬರೆದಿದ್ದ ವ್ಯಕ್ತಿಯನ್ನ ಗುರಿತಿಸಲಾಗಿದೆ, ಬಂಧಿತನನ್ನು 33 ವರ್ಷದ ಆರೋಪಿ ಅಂಕಿತ್ ಗೋಯಲ್ ಎಂದು ಗುರುತಿಸಲಾಗಿದ್ದು. ಅಂಕಿತ್‌ ಕೃತ್ಯ ಮೆಟ್ರೋ ನಿಲ್ದಾಣದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಾಕ್ಷಿ ಆಧರಿಸಿ ದೆಹಲಿ ಪೊಲೀಸರು ಬಂಧಿಸಿದ್ದು, ಮೆಟ್ರೋ ಘಟಕವು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.