SK Home Ad
Home ತಾಜಾ ಸುದ್ದಿ ಚಿಂಚನಸೂರ್ ರಾಜೀನಾಮೆ ಬಿಜೆಪಿಗೆ ನಷ್ಟವಿಲ್ಲ

ಚಿಂಚನಸೂರ್ ರಾಜೀನಾಮೆ ಬಿಜೆಪಿಗೆ ನಷ್ಟವಿಲ್ಲ

0
231
CM

ಹುಬ್ಬಳ್ಳಿ: ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ನಿಂದ ಬಂದಿದ್ದರು, ಮರಳಿ ಅಲ್ಲಿಗೇ ಹೋಗ್ತಿದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆದರ್ಶನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುರುಮಠಕಲ್ ಕ್ಷೇತ್ರದಲ್ಲಿ ನಮ್ಮ ಪಕ್ಷದ ಸಂಘಟನೆ ಚೆನ್ನಾಗಿದೆ. ಗುರುಮಠಕಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.