SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಸಿಎಂಗೆ ಬಳ್ಳಾರಿ ಘಟನೆ ವಿವರಿಸಿದ ಭರತ್ ರೆಡ್ಡಿ, ಸಚಿವ ಜಮೀರ್

ಸಿಎಂಗೆ ಬಳ್ಳಾರಿ ಘಟನೆ ವಿವರಿಸಿದ ಭರತ್ ರೆಡ್ಡಿ, ಸಚಿವ ಜಮೀರ್

0
209

ಬಳ್ಳಾರಿ: ಬಳ್ಳಾರಿ ಘರ್ಷಣೆ, ಕಾರ್ಯಕರ್ತನ ಸಾವು ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ ಅಹ್ಮದ್ ಮತ್ತು ಶಾಸಕ ಭರತ್ ರೆಡ್ಡಿ ವಿವರಿಸಿದ್ದಾರೆ.

ತೋರಣಗಲ್‌ನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ಸಚಿವರು ಹಾಗೂ ಶಾಸಕರು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಯವರು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಡಿಜಿಪಿ ಹಿತೇಂದ್ರ, ಐಜಿಗಳಾದ ವರ್ತಿಕಾ ಕಟಿಯಾರ್ ಹಾಗೂ ರವಿಕಾಂತೇಗೌಡ ಅವರಿಂದಲೂ ಘಟನೆ ಕುರಿತು ಮಾಹಿತಿ ಪಡೆದುಕೊಂಡರು.