ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಕೋರಿ ಆತನ ಪತ್ನಿ ರೇಣುಕಾ ಪಾಟೀಲ ಮನವಿ ಮಾಡಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿಗಳನ್ನು ಭೆಟ್ಟಿ ಮಾಡಿ ಮನವಿ ಪತ್ರ ಕೊಡಲು ಅವರು ಕುಟುಂಬ ಸಮೇತ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಮುಖ್ಯಮಂತ್ರಿಗಳು 11 ಕ್ಕೆ ಬೆಳಗಾವಿಗೆ ಬರಬೇಕಿತ್ತು. ಆದರೆ ಅವರು ಬರುವುದು ಒಂದು ತಾಸು ತಡವಾಯಿತು. ಹೀಗಾಗಿ ಅವರ ದಾರಿ ಕಾದು ನಂತರ ಸಿಎಂ ಅವರನ್ನು ಬೆಟ್ಟಿ ಮಾಡಿದರು