SK Home Ad
Home ಸುದ್ದಿ ರಾಜ್ಯ ರಾಜಣ್ಣ, ರಮೇಶ್‌ ಬಳಿಕ ಸತೀಶ್‌ ಟಾರ್ಗೆಟ್‌?; ಎಚ್‌ಡಿಕೆ ಸ್ಫೋಟಕ ಹೇಳಿಕೆ

ರಾಜಣ್ಣ, ರಮೇಶ್‌ ಬಳಿಕ ಸತೀಶ್‌ ಟಾರ್ಗೆಟ್‌?; ಎಚ್‌ಡಿಕೆ ಸ್ಫೋಟಕ ಹೇಳಿಕೆ

0
56

ಹಾಸನ: ತಾವು ಇತ್ತೀಚೆಗೆ ಬಳಸಿದ ಒಂದು ಪದದ ಕುರಿತು ಕಳೆದ ಹತ್ತು ದಿನಗಳಿಂದ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

‘ಕುಮಾರಸ್ವಾಮಿ ಯಾವಾಗ ಬರುತ್ತಾರೆ? ಅವರ ಬಳಿ ಏನಿದೆ?’ ಎಂದು ಕೆಲವರು ರಾತ್ರಿಯಿಡೀ ಚರ್ಚಿಸುತ್ತಿದ್ದಾರೆ. ಆದರೆ ಮಾಧ್ಯಮ ಸ್ನೇಹಿತರಿಗೆ ನಿರಾಸೆ ಮಾಡುವುದಿಲ್ಲ. ಸೂಕ್ತ ಸಮಯದಲ್ಲಿ ಎಲ್ಲವನ್ನೂ ಬಹಿರಂಗಪಡಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ನ ಹಲವು ನಾಯಕರ ರಾಜಕೀಯ ಬೆಳವಣಿಗೆಗಳನ್ನೂ ಪ್ರಸ್ತಾಪಿಸಿದ ಅವರು, ಸಚಿವ ರಾಜಣ್ಣ ಅವರ ಧ್ವನಿಯನ್ನು ಈಗಾಗಲೇ ಅಡಗಿಸಲಾಗಿದೆ. ರಮೇಶ್ ಜಾರಕಿಹೊಳಿ ಅವರನ್ನೂ ರಾಜಕೀಯವಾಗಿ ಮುಗಿಸಲಾಗಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವುದಾಗಿ ಹೇಳುತ್ತಿದ್ದ ಸತೀಶ್ ಜಾರಕಿಹೊಳಿ ಅವರನ್ನೂ ಹೇಗೆ ಮುಗಿಸಬೇಕು ಎಂಬ ಸಿದ್ಧತೆ ನಡೆದಿದೆ ಎಂದು ಆರೋಪಿಸಿದರು.

ಇದೇ ವೇಳೆ, ಮಾಜಿ ಸಚಿವ ನಾಗೇಂದ್ರ ಅವರ ಪ್ರಕರಣದಲ್ಲೂ ಹಲವು ವಿಚಾರಗಳು ನಡೆದಿವೆ. ಅವುಗಳ ಬಗ್ಗೆಯೂ ತಮ್ಮ ಬಳಿ ಮಾಹಿತಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.

‘ನನಗೆ ಯಾವುದೇ ಆತುರ ಇಲ್ಲ. ಸಮಯ ಬಂದಾಗ ಎಲ್ಲ ವಿಚಾರಗಳನ್ನು ಜನರ ಮುಂದಿಡುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದರು.