SK Home Ad
Home ಸುದ್ದಿ ದೇಶ ‘ಏನೇ ಆದರೂ ಜುಲೈ 20ರವರೆಗೆ ಜೀವಂತವಾಗಿರುತ್ತೇನೆ’: ವಾಂಗ್‌ಚುಕ್

‘ಏನೇ ಆದರೂ ಜುಲೈ 20ರವರೆಗೆ ಜೀವಂತವಾಗಿರುತ್ತೇನೆ’: ವಾಂಗ್‌ಚುಕ್

0
47

‘ನಾನು ದುರ್ಬಲನಾಗಿದ್ದೇನೆ, ಆದರೆ ನನ್ನ ಸಂಕಲ್ಪ ಅಚಲ’: ಜುಲೈ 20 ರಂದು ನಮ್ಮ ಮೆರವಣಿಗೆ ಯಶಸ್ವಿಯಾಗದಿದ್ದರೆ, ನಾನು ದೆವ್ವವಾಗಿ ಹಿಂತಿರುಗುತ್ತೇನೆ!” – ಉಪವಾಸದ 20ನೇ ದಿನ ಸೋನಮ್ ವಾಂಗ್‌ಚುಕ್ ಭಾವನಾತ್ಮಕ ಮಾತು

ನವದೆಹಲಿ: ಹವಾಮಾನ ಕಾರ್ಯಕರ್ತೆ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಶುಕ್ರವಾರ 20ನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ಆರೋಗ್ಯ ಗಂಭೀರ ಹಂತವನ್ನು ತಲುಪಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದರೂ, ಅವರು ಉಪವಾಸ ಮುಂದುವರಿಸಿದ್ದು, ಜುಲೈ 20ರಂದು ನಡೆಯಲಿರುವ ಸಂಸತ್ ಮೆರವಣಿಗೆಯನ್ನು ಯಶಸ್ವಿಗೊಳಿಸುವಂತೆ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿಭಟನೆ ಈಗಾಗಲೇ 28ನೇ ದಿನಕ್ಕೆ ಕಾಲಿಟ್ಟಿದೆ. ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಈ ಹೋರಾಟದಲ್ಲಿ ಜೂನ್ 28ರಂದು ಸೇರಿದ್ದ ಸೋನಮ್ ವಾಂಗ್‌ಚುಕ್, ಅಂದಿನಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಇದನ್ನೂ ಓದಿ: ‘3 Idiots’ ನ ರಾಂಚೊ ಪಾತ್ರಕ್ಕೆ ವಾಂಗ್‌ಚುಕ್ ಸ್ಫೂರ್ತಿ ಅಲ್ಲ : ಆಮಿರ್

ಪ್ರತಿಭಟನಾ ಸ್ಥಳದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ದೈಹಿಕ ಸ್ಥಿತಿ ಹದಗೆಟ್ಟಿರುವುದನ್ನು ಒಪ್ಪಿಕೊಂಡರೂ, ತಮ್ಮ ಮನೋಬಲ ಇನ್ನಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಭಾವನಾತ್ಮಕವಾಗಿ ಮಾತನಾಡಿದ ಅವರು, “ನಾನು ಹೊರಗಿನಿಂದ ದುರ್ಬಲನಾಗಿದ್ದೇನೆ, ಆದರೆ ಒಳಗಿನಿಂದ ತುಂಬಾ ಬಲಶಾಲಿಯಾಗಿದ್ದೇನೆ. ಜುಲೈ 20ರಂದು ಸಂಸತ್ತಿಗೆ ಶಾಂತಿಯುತ ಮೆರವಣಿಗೆ ನಡೆಸಲು ಇದೇ ಚೈತನ್ಯ ನಮಗೆ ಬೇಕಾಗಿದೆ. ನಾವು ಪ್ರಜಾಪ್ರಭುತ್ವದ ದೇವಾಲಯಕ್ಕೆ ತೆರಳಿ ನಮ್ಮ ಮನವಿಯನ್ನು ಮಂಡಿಸುತ್ತೇವೆ,” ಎಂದು ಅವರು ಹೇಳಿದರು. ನೀವು ಬರದಿದ್ದರೆ ಮತ್ತು ಜುಲೈ 20ರ ಮೆರವಣಿಗೆ ಯಶಸ್ವಿಯಾಗದಿದ್ದರೆ, ನಾನು ದೆವ್ವವಾಗಿ ಹಿಂತಿರುಗುತ್ತೇನೆ,” ಎಂದು ಹೇಳಿದರು.

ಇದನ್ನೂ ಓದಿ: ವಾಂಗ್‌ಚುಕ್ ಬೆಂಬಲಕ್ಕೆ ನಿಂತ ‘3 Idiots’ ಚತುರ್: Video ವೈರಲ್!

ಆರೋಗ್ಯ ಗಂಭೀರ ಹಂತಕ್ಕೆ : ಸೋನಮ್ ವಾಂಗ್‌ಚುಕ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವು, ಅವರ ಆರೋಗ್ಯ ಸ್ಥಿತಿ ಗಂಭೀರ ಹಂತ ತಲುಪಿದೆ ಎಂದು ಎಚ್ಚರಿಸಿದೆ. ದೀರ್ಘಕಾಲದ ಉಪವಾಸದಿಂದ ದೇಹದ ಹಲವು ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಆದಾಗ್ಯೂ, ಸರ್ಕಾರದಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಗದಿರುವ ಕಾರಣ, ಈಗಲೇ ಉಪವಾಸ ಅಂತ್ಯಗೊಳಿಸಿದರೆ ಅದು ತಪ್ಪು ಸಂದೇಶ ನೀಡುತ್ತದೆ ಎಂದು ವಾಂಗ್‌ಚುಕ್ ಹೇಳಿದ್ದಾರೆ. ಹೀಗಾಗಿ, ಜುಲೈ 20ರ ಸಂಸತ್ ಮೆರವಣಿಗೆಯನ್ನು ಯಶಸ್ವಿಗೊಳಿಸುವತ್ತ ಗಮನ ಹರಿಸುವಂತೆ ಅವರು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಹೈಕೋರ್ಟ್ ಮಧ್ಯಪ್ರವೇಶ : ಈ ಪ್ರಕರಣವನ್ನು ಗಮನಿಸಿರುವ ದೆಹಲಿ ಹೈಕೋರ್ಟ್, ಸೋನಮ್ ವಾಂಗ್‌ಚುಕ್ ಅವರ ಆರೋಗ್ಯವನ್ನು ಪ್ರತಿದಿನ ವೈದ್ಯಕೀಯವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಅವರ ಆರೋಗ್ಯ ಮತ್ತಷ್ಟು ಹದಗೆಟ್ಟರೆ ತಕ್ಷಣ ವೈದ್ಯಕೀಯ ನೆರವು ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಅಮೀನ್ ಅವರು ತೀವ್ರ ನಿರ್ಜಲೀಕರಣದಿಂದ ಹೈಪೋವೊಲೆಮಿಕ್ ಶಾಕ್ ಅಪಾಯದಲ್ಲಿದ್ದು, ನೇಹಾ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 49 mg/dLಗೆ ಇಳಿದಿದೆ. ಮನೀಶ್ ಅವರು ತಮ್ಮ ದೇಹದ ತೂಕದ ಶೇಕಡಾ 10ಕ್ಕಿಂತ ಹೆಚ್ಚು ಕಳೆದುಕೊಂಡಿದ್ದಾರೆ ಎಂದು ಎಐಎಸ್‌ಎ ತಿಳಿಸಿದೆ.

ಮಳೆಗಾಲದ ಸಂಸತ್ ಅಧಿವೇಶನದ ಮೊದಲ ದಿನವಾದ ಜುಲೈ 20ರಂದು ಸಂಸತ್ತಿಗೆ ಶಾಂತಿಯುತ ಮೆರವಣಿಗೆ ನಡೆಸಲು ಸಂಘಟನೆ ಕರೆ ನೀಡಿದ್ದು, ಇದಕ್ಕೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಹೋರಾಟಗಾರರು ಬೆಂಬಲ ಸೂಚಿಸುತ್ತಿದ್ದಾರೆ.