Home Advertisement
Home ತಾಜಾ ಸುದ್ದಿ ಲೆಹರ್ ಸಿಂಗ್ ಮಾಡಿರುವ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ

ಲೆಹರ್ ಸಿಂಗ್ ಮಾಡಿರುವ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ

0
94

ರಾಹುಲ್ ಖರ್ಗೆ ಅವರ ಟ್ರಸ್ಟ್ ಗೆ ನಿಯಮಾನುಸಾರ ಸಿ.ಎ.ನಿವೇಶನ ಹಂಚಿಕೆ

ಬೆಂಗಳೂರು: ಬಿಜೆಪಿ ಸಂಸದರಾದ ಲೆಹರ್ ಸಿಂಗ್ ಅವರು ಮಾಡಿರುವ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿ.ಎ. ನಿವೇಶನವನ್ನು ಕಾನೂನಿನ ಪ್ರಕಾರವೇ ನಿಗದಿತ ಬೆಲೆಗೆ ಕೊಡಲಾಗಿದೆ. ಅವರು ಅಲ್ಲಿ ಸಂಶೋಧನೆ ಮತ್ತು ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದಾರೆ. ಲೆಹರ್ ಸಿಂಗ್ ಆರೋಪಿಸಿರುವಂತೆ ಯಾವ ನಿಯಮವೂ ಉಲ್ಲಂಘನೆ ಆಗಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 116 ಎಕರೆ ಭೂಮಿಯನ್ನು ಚಾಣಕ್ಯ ವಿವಿಗೆ ಕೇವಲ ರೂ. 50 ಕೋಟಿಗೆ ಕೊಡಲಾಗಿದೆ. ಸರ್ಕಾರಕ್ಕೆ ಸುಮಾರು ರೂ. 137ಕೋಟಿ ನಷ್ಟವಾಗಿದೆ. ಸುಮ್ಮ ಸುಮ್ಮನೆ ನಮ್ಮ ವಿರುದ್ಧ ಆಪಾದನೆ ಮಾಡದೆ, ಈ ಹಿಂದಿನ ಸರ್ಕಾರದ ತಪ್ಪು ನಿರ್ಧಾರಗಳನ್ನು ಲೆಹರ್ ಸಿಂಗ್ ಅವರು ಪ್ರಶ್ನಿಸುವ ಕಾರ್ಯ ಮಾಡಲಿ ಎಂದರು.