Home Advertisement
Home ಕೃಷಿ/ವಾಣಿಜ್ಯ ಆಲಿಕಲ್ಲು ಮಳೆ: ರೈತರಿಗೆ ವರದಾನವೋ ಅಥವಾ ಶಾಪವೋ? ಇಲ್ಲಿದೆ ಡಿಟೇಲ್ಸ್

ಆಲಿಕಲ್ಲು ಮಳೆ: ರೈತರಿಗೆ ವರದಾನವೋ ಅಥವಾ ಶಾಪವೋ? ಇಲ್ಲಿದೆ ಡಿಟೇಲ್ಸ್

0
74

ಬೆಂಗಳೂರು: ರಾಜ್ಯದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಆಲಿಕಲ್ಲು ಮಳೆಯು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಪ್ರಕೃತಿಯ ಈ ವಿಸ್ಮಯಕಾರಿ ವಿದ್ಯಮಾನವು ನೋಡುಗರಿಗೆ ಹಿತವೆನಿಸಿದರೂ, ಇದರ ಪರಿಣಾಮಗಳು ಮಾತ್ರ ಪರಿಸರ ಮತ್ತು ಕೃಷಿ ಕ್ಷೇತ್ರದ ಮೇಲೆ ಆಳವಾದ ಪ್ರಭಾವ ಬೀರುತ್ತವೆ.

ಆಲಿಕಲ್ಲು ಮಳೆಯಿಂದಾಗುವ ಹಾನಿಗಳು: ಆಲಿಕಲ್ಲು ಮಳೆಯಿಂದಾಗುವ ಅತಿ ದೊಡ್ಡ ಹೊಡೆತ ಬೀಳುವುದು ಕೃಷಿ ವಲಯಕ್ಕೆ. ಗಾಳಿಯಲ್ಲಿ ವೇಗವಾಗಿ ಬರುವ ಹಿಮದ ಗಡ್ಡೆಗಳು ಬೆಳೆದು ನಿಂತ ಮಾವು, ದ್ರಾಕ್ಷಿ, ದಾಳಿಂಬೆ ಮತ್ತು ತರಕಾರಿ ಬೆಳೆಗಳನ್ನು ಅ‌ ಕ್ಷರಶಃ ನಾಶಪಡಿಸುತ್ತವೆ. ಇದು ರೈತರ ಶ್ರಮವನ್ನು ಮಣ್ಣುಪಾಲು ಮಾಡುವುದಲ್ಲದೆ, ಆರ್ಥಿಕವಾಗಿ ದೊಡ್ಡ ಸಂಕಷ್ಟ ತಂದೊಡ್ಡುತ್ತದೆ.

ಕೇವಲ ಕೃಷಿಯಷ್ಟೇ ಅಲ್ಲದೆ, ಅತಿ ದೊಡ್ಡ ಗಾತ್ರದ ಆಲಿಕಲ್ಲುಗಳು ಬಿದ್ದಾಗ ಮನೆಗಳ ಮೇಲ್ಛಾವಣಿ (ಹೆಂಚು ಅಥವಾ ಶೀಟ್), ವಾಹನಗಳ ಗಾಜುಗಳು ಜಖಂಗೊಳ್ಳುತ್ತವೆ. ಹಕ್ಕಿಗಳು ಮತ್ತು ಸಣ್ಣಪುಟ್ಟ ಪ್ರಾಣಿಗಳು ಈ ಮಳೆಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಆಲಿಕಲ್ಲಿನಿಂದ ಪ್ರಯೋಜನೆ: ಎಲ್ಲವೂ ನಷ್ಟವೇ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಆಲಿಕಲ್ಲು ಮಳೆಯಿಂದ ಕೆಲವು ಸಕಾರಾತ್ಮಕ ಅಂಶಗಳೂ ಇವೆ. ಮುಖ್ಯವಾಗಿ ವಾತಾವರಣದಲ್ಲಿನ ಅತಿಯಾದ ಶಾಖವನ್ನು ತಕ್ಷಣವೇ ಕಡಿಮೆ ಮಾಡಿ ತಂಪು ವಾತಾವರಣ ನಿರ್ಮಿಸಲು ಇದು ಸಹಕಾರಿ. ಭೂಮಿಯ ಆಳಕ್ಕೆ ತೇವಾಂಶ ಇಳಿಯಲು ಮತ್ತು ಅಂತರ್ಜಲ ಮಟ್ಟ ವೃದ್ಧಿಸಲು ಇಂತಹ ಮಳೆ ಪೂರಕವಾಗಿರುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ, ಆಲಿಕಲ್ಲುಗಳು ಬೀಳುವಾಗ ವಾತಾವರಣದಲ್ಲಿರುವ ಧೂಳಿನ ಕಣಗಳನ್ನು ಮತ್ತು ಮಾಲಿನ್ಯಕಾರಕಗಳನ್ನು ನೆಲಕ್ಕೆ ತಳ್ಳುತ್ತವೆ, ಇದರಿಂದ ಗಾಳಿಯು ಶುದ್ಧವಾಗುತ್ತದೆ.

ಓದುಗರ ಗಮನಕ್ಕೆ: ಆಲಿಕಲ್ಲು ಮಳೆ ಬರುವ ಮುನ್ಸೂಚನೆ ಇದ್ದಾಗ ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವುದು ಉತ್ತಮ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರವು ಸೂಕ್ತ ಪರಿಹಾರ ನೀಡುವ ಮೂಲಕ ನಷ್ಟ ಅನುಭವಿಗಳ ನೆರವಿಗೆ ಧಾವಿಸಬೇಕಿದೆ.

ಒಟ್ಟಾರೆಯಾಗಿ.. ಆಲಿಕಲ್ಲು ಮಳೆಯು ಪ್ರಕೃತಿಯ ಒಂದು ಸೌಂದರ್ಯವಾದರೂ, ಅದರ ತೀವ್ರತೆ ಹೆಚ್ಚಾದಾಗ ಅದು ಮಾನವನ ಬದುಕಿಗೆ ಸವಾಲಾಗಿ ಪರಿಣಮಿಸುತ್ತದೆ.