ಬಾಗಲಕೋಟೆ: ನಗರದಲ್ಲಿ ಗುರುವಾರ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿದ್ದಾರ್ಥ ಗೋಯಲ್ ಹಾಗೂ ವೈ. ಅಮರನಾಥ ರೆಡ್ಡಿ ಅವರು ನಗರ ಪ್ರದಕ್ಷಿಣೆ ಹಾಕಿ ಭದ್ರತೆ ಪರಿಶೀಲಿಸಿದರು.
ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಮಾರುಕಟ್ಟೆಗೆ ಆಗಮಿಸಿದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸಿಬ್ಬಂದಿ ನೋಡಿಕೊಳ್ಳಬೇಕು. ಅಧಿಕಾರಿಗಳ ಹೊರತಾಗಿ ಕೆಳಹಂತದ ಸಿಬ್ಬಂದಿ ಮೊಬೈಲ್ನಲ್ಲಿ ಮಗ್ನರಾಗಬೇಡಿ. ಯಾರೂ ಮೊಬೈಲ್ ಬಳಸದೆ ಸಿದ್ಧತೆಯಲ್ಲಿರಿ. ಯಾರಾದರೂ ಕಿರಿಕ್ ಮಾಡಿದರೆ ತಕ್ಷಣ ಕ್ರಮಕೈಗೊಳ್ಳಿ ಎಂದು ಅಮರನಾಥ ರೆಡ್ಡಿ ಸೂಚಿಸಿದರು.
ಇದನ್ನೂ ಓದಿ: ಅಂಕಣ ಬರಹ: ಆರೋಪಕ್ಕೆಲ್ಲ `ಷಡ್ಯಂತ್ರ – ಜಾತಿ’ ಗಳೇ ಗುರಾಣಿ!
ವಿವಾದಿತ ಪಂಕಾ ಮಸೀದಿ, ಕಿಲ್ಲಾ ಓಣಿಯ ಮಾರ್ಗಗಳಲ್ಲಿ ಪೊಲೀಸರು ಲಾಕ್ಡೌನ್ ಮಾದರಿಯಲ್ಲಿ ಭದ್ರತೆ ನಿಯೋಜಿಸಿದ್ದಾರೆ.























