ಬೆಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಶಾಕ್

0
31

ಬೆಳಗಾವಿ: ನಗರದಲ್ಲಿ ಮೂರು ಕಡೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿನ ಕಮರ್ಷಿಯಲ್ ‌ಟ್ಯಾಕ್ಸ್ ಎಸಿ ಆಗಿರುವ ವೆಂಕಟೇಶ ಮಜುಂದಾರ್ ಮೇಲೆ ದಾಳಿ ನಡೆಸಿದ್ದಾರೆ, ಈ ಮೊದಲು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ‌ಮಜುಂದಾರ್
ಆಗ ಬೆಳಗಾವಿಯಲ್ಲೂ ಮನೆ ಖರೀದಿಸಿದ್ದ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದು, ನಿಪ್ಪಾಣಿ ‌ತಾಲೂಕಿನ ಬೋರಗಾಂವ ಗ್ರಾಮದ ವಿಲೇಜ್ ಅಕೌಂಟೆಂಟ್ ವಿಠ್ಠಲ ಶಿವಪ್ಪ ಮನೆ ಮೇಲೂ ‌ದಾಳಿ ಮಾಡಿದ್ದಾರೆ, ಈ‌ ಹಿಂದೆ ಬೆಳಗಾವಿಯಿಂದ ಬಾಗಲಕೋಟೆಗೆ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ವಿಠ್ಠಲ 1 ಕೋಟಿ 10 ಲಕ್ಷ ಹಣ ಸಂಗ್ರಹಿಸುವ ವೇಳೆ ರಾಮದುರ್ಗ ಚೆಕ್‌ಪೋಸ್ಟ್ ಅಧಿಕಾರಿಗಳ ದಾಳಿ ಮಾಡಿದ್ದರು, ಈ ಹಿನ್ನೆಲೆಯಲ್ಲಿ ‌ಗ್ರಾಮಲೆಕ್ಕಾಧಿಕಾರಿ ವಿಠ್ಠಲ ‌ಮನೆ, ಕಚೇರಿ ಮೇಲೂ ‌ದಾಳಿ ಮಾಡಲಾಗಿದೆ, ವಿಠ್ಠಲ ಇರುವ ನಿಪ್ಪಾಣಿಯ ಬಾಡಿಗೆ ಮನೆಯಲ್ಲಿ ಹಣ ಸಿಕ್ಕಿರುವ ಮಾಹಿತಿ ಇದ್ದು, ಧಾರವಾಡದ ಕೆಐಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ಮನೆ ಮೇಲೂ ದಾಳಿ ಮಾಡಲಾಗಿದೆ, ಸವದತ್ತಿ ತಾಲೂಕಿನ ಉಗರಗೋಳದಲ್ಲಿ ಫಾರ್ಮ್‌ಹೌಸ್ ಹೊಂದಿರುವ ಗೋವಿಂದಪ್ಪ ಈ ಕಾರಣಕ್ಕೆ ‌ಧಾರವಾಡ ಜೊತೆಗೆ ಫಾರ್ಮ್‌ಹೌಸ್ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಬೆಳಗಾವಿ ಲೋಕಾಯುಕ್ತ ಎಸ್‌ಪಿ ಹಣಮಂತರಾಯ ನೇತೃತ್ವದಲ್ಲಿ ಎಲ್ಲೆಡೆ ದಾಳಿ ನಡೆದಿದೆ.

Previous articleಕೆಐಎಡಿಬಿ ಅಧಿಕಾರಿ ಮನೆ ಮೇಲೆ ಲೋಕಾ ದಾಳಿ
Next articleಅಜ್ಜಿಯಾದ ಸುಮಲತಾ ಅಂಬರೀಶ್‌ : ಜೂನಿಯರ್ ಅಂಬಿ ಆಗಮನ