ಬಜರಂಗದಳದ ಮೂವರಿಗೆ ಗಡಿಪಾರು ನೋಟಿಸು

0
10

ಮಂಗಳೂರು: ಸಮಾಜದಲ್ಲಿ ನೈತಿಕ ಗುಂಡಾಗಿರಿಯಲ್ಲಿ ಪದೇ ಪದೇ ತೊಡಗಿಕೊಳ್ಳುವ ಆರೋಪಿಗಳ ವಿರುದ್ಧ ರೌಡಿಶೀಟರ್ ತೆರೆದು ಅಪರಾಧ ಪ್ರಕರಣದ ಆರೋಪಿಗಳ ಮೇಲೆ ಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತದೆ. ಆರೋಪಿಗಳು ಯಾವ ಸಂಘಟನೆಗೆ ಸೇರಿದವರು, ಕಾರ್ಯಕರ್ತರು ಎಂಬುದು ನಮಗೆ ಮುಖ್ಯವಲ್ಲ. ನಮಗೆ ಅವರು ಆರೋಪಿಗಳು ಮಾತ್ರ ಎಂದು ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ಹೇಳಿದ್ದಾರೆ.
ಬಜರಂಗದಳದ ಮೂವರು ಕಾರ್ಯಕರ್ತರಿಗೆ ಗಡಿಪಾರಿಗೆ ನೋಟಿಸು ನೀಡಲಾಗಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂದು ವರ್ಷದಲ್ಲಿ ಈಗಾಗಲೇ ೬೦ ಇಂತಹ ರೌಡಿಗಳನ್ನು ಗಡಿಪಾರಿಗೆ ಕ್ರಮ ವಹಿಸಲಾಗಿದೆ. ಇದು ನಿರಂತರ ಪ್ರಕ್ರಿಯೆ. ಈಗಾಗಲೇ ಮೂವರು ಮಾತ್ರ ಅಲ್ಲ, ಅದಕ್ಕಿಂತ ಹೆಚ್ಚಿನ ಮಂದಿಯ ಮೇಲೆ ಕ್ರಮ ವಹಿಸಲಾಗಿದೆ. ಅನೈತಿಕ ಗೂಂಡಾಗಿರಿಗೆ ಸಂಬಂಧಿಸಿ ಆ ಮೂವರ ಮೇಲೆ ಅತೀ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಅವರನ್ನು ಗಡಿಪಾರಿಗೆ ಸಂಬಂಧಿಸಿ ಠಾಣೆಯಿಂದ ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ, ಅದಕ್ಕೆ ಪೂರಕವಾಗಿ ಕ್ರಮ ವಹಿಸಲಾಗುತ್ತಿದೆ. ನೋಟಿಸು ಜಾರಿಯಾಗಿದ್ದು, ಮುಂದಿನ ಕ್ರಮ ವಹಿಸಲಾಗುವುದು ಎಂದಿದ್ದಾರೆ.

Previous articleಮೂವರು ಡ್ರಗ್ ಪೆಡ್ಲರ್‌ಗಳ ಸೆರೆ: ಪಿಸ್ತೂಲ್, ಡ್ರಗ್ಸ್ ವಶ
Next articleಖಾನಾಪುರ: ಶಾಲೆಗಳಿಗೆ ರಜೆ ಘೋಷಣೆ