SK Home Ad
Home ತಾಜಾ ಸುದ್ದಿ ಸಂಚು ರೂಪಿಸಿ ಕೇಜ್ರಿವಾಲ್ ಬಂಧನ

ಸಂಚು ರೂಪಿಸಿ ಕೇಜ್ರಿವಾಲ್ ಬಂಧನ

0
114

ನವದೆಹಲಿ: ಸಂಚು ರೂಪಿಸಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.
ತಿಹಾರ್ ಜೈಲಿನಿಂದ ಹೊರಬಂದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಸಂಚು ರೂಪಿಸಿದ್ದು ಹೇಗೆ ಎಂದು ಹೇಳಲು ಇಂದು ನಿಮ್ಮ ಮುಂದೆ ಹಾಜರಾಗಿದ್ದೇನೆ, ಈ ಮದ್ಯ ಹಗರಣ ಬಿಜೆಪಿಯಿಂದಲೇ ನಡೆದಿದೆ ಎಂಬುದನ್ನೂ ಬಹಿರಂಗಪಡಿಸುತ್ತೇನೆ. ಬಿಜೆಪಿಯ ಹಿರಿಯ ನಾಯಕರು ಭಾಗಿಯಾಗಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.