ಬೆಂಗಳೂರು: ಕಟ್ಟಾ ಕಾಂಗ್ರೆಸಿಗರು ನಿಯತ್ತಿನ ನಾಯಿಗಳು. ನಾಯಿಗಳ ಸ್ವಭಾವ ಋಣ ತೀರಿಸೋದು ಎಂದು ಹೇಳುವ ಮೂಲಕ ಸಚಿವ ಹೆಚ್.ಸಿ. ಮಹಾದೇವಪ್ಪ ಹೇಳಿಕೆಗೆ ಮಾಜಿ ಸಂಸದ, ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿರುಗೇಟು ನೀಡಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಶಾಸಕರ ಹೇಳಿಕೆ ಕುರಿತು ಸಚಿವ ಹೆಚ್.ಸಿ. ಮಹಾದೇವಪ್ಪ, ಅವರು ಬಾಲ ನಾಯಿಯನ್ನೇ ಅಲ್ಲಾಡಿಸಬಾರದು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಬೈಕ್ ಡಿಕ್ಕಿಗೆ ತುಂಡಾದ ವಿದ್ಯುತ್ ಕಂಬ: CCTVಯ ದೃಶ್ಯ ವೈರಲ್
ಬೀದಿನಾಯಿಗಳಿಗೆ ಊಟ ಹಾಕೋದು, ನನ್ನನ್ನು ಕಾಯುತ್ತೆ ಅಂತ. ನಾಯಿಗಿರುವ ನಿಯತ್ತು, ಮನುಷ್ಯನಿಗಿಲ್ಲ ಎಂಬ ಸಾಕಷ್ಟು ನಾನ್ನುಡಿಗಳಿವೆ. ಯಾವತ್ತೂ ಕೂಡ ಋಣ ಇಟ್ಕೊಂಡು ತೀರಿಸುವುದು ನಾಯಿಗಳು ಎಂದರು.






















