SK Home Ad
Home ಸುದ್ದಿ ರಾಜ್ಯ ಸಿದ್ದರಾಮಯ್ಯರ ಮಾತುಗಳು ಹಿಂದೂಗಳನ್ನು ಕೆರಳಿಸುತ್ತವೆ: ಆರ್‌ ಅಶೋಕ್

ಸಿದ್ದರಾಮಯ್ಯರ ಮಾತುಗಳು ಹಿಂದೂಗಳನ್ನು ಕೆರಳಿಸುತ್ತವೆ: ಆರ್‌ ಅಶೋಕ್

0
303
ಆರ್‌ ಅಶೋಕ್

ಮಾಂಸ ಸೇವನೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಮಾತುಗಳು ಹಿಂದೂಗಳನ್ನು ಕೆರಳಿಸುತ್ತವೆ ಎಂದು ಸಚಿವ ಆರ್.‌ ಅಶೋಕ್‌ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅವರವರ ಆಹಾರ ಪದ್ಧತಿಯಂತೆ ಅವರು ಆಹಾರ ಸೇವಿಸುತ್ತಾರೆ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅಡುಗೆ ಮನೆಯಲ್ಲಿ ಏನು ಮಾಡಬೇಕು, ಬಚ್ಚಲು ಮನೆಯಲ್ಲಿ ಏನು ಮಾಡಬೇಕು ಅದನ್ನೇ ಮಾಡಬೇಕು. ದೇವಸ್ಥಾನಕ್ಕೆ ಹೋಗಲು ಒಂದು ನಿಯಮವಿದೆ ಎಂದರು.