Home Advertisement
Home ಕ್ರೀಡೆ ಸಿದ್ದರಾಮಯ್ಯರನ್ನ ಬೇಟಿಯಾದ ಐರೆನ್ ಲೇಡಿ ಆಪ್ ಇಂಡಿಯಾ

ಸಿದ್ದರಾಮಯ್ಯರನ್ನ ಬೇಟಿಯಾದ ಐರೆನ್ ಲೇಡಿ ಆಪ್ ಇಂಡಿಯಾ

0
111

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಐರೆನ್ ಲೇಡಿ ಆಪ್ ಇಂಡಿಯಾ ಬೇಟಿಯಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಯುನೈಟೆಡ್ ಮಾಸ್ಟರ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಐರೆನ್ ಲೇಡಿ ಆಪ್ ಇಂಡಿಯಾ ಖ್ಯಾತಿಯ ಖುದ್ಸಿಯಾ ನಜಿರ್ ಅವರನ್ನು ಮುಖ್ಯಮಂತ್ರಿ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಅಭಿನಂದಿಸಿ, ಕ್ರೀಡಾ ಬದುಕು ಮತ್ತಷ್ಟು ಸಾಧನೆಗಳಿಂದ ಕೂಡಿರಲಿ ಎಂದು ಶುಭ ಕೋರಿದರು. ಬಂಗಾರಪೇಟೆ ಮೂಲದ ಕೆಎಸ್‌ಆರ್‌ಟಿಸಿ ನೌಕರರಾಗಿರುವ ಖುದ್ಸಿಯಾ ಅವರ ಸಾಧನೆ ಮತ್ತಷ್ಟು ಜನರಿಗೆ ಪ್ರೇರಣೆಯಾಗಲಿ ಎಂದಿದ್ದಾರೆ