SK Home Ad
Home ತಾಜಾ ಸುದ್ದಿ ಬಸ್ ಟಿಕೇಟ್ ದರ ಹೆಚ್ಚಳ ಸುಳಿವು

ಬಸ್ ಟಿಕೇಟ್ ದರ ಹೆಚ್ಚಳ ಸುಳಿವು

0
134

ಬೆಳಗಾವಿ(ಮೋಳೆ): ಸಾರಿಗೆ ಇಲಾಖೆ ನಷ್ಟದಲ್ಲಿದೆ, ಡಿಸೇಲ್, ಸ್ಪೆರ್ ಪಾರ್ಟ್ ಬಿಡಿ ಭಾಗಗಳ ದರ ಹೆಚ್ಚಳ ಆಗಿರುವುದರಿಂದ ಬಸ್ ಟಿಕೇಟ್ ದರ ಹೆಚ್ಚಳ ಅನಿವಾರ್ಯ ಎಂದು ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಅವರು ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡುವಾಗ ಈ ವಿಷಯ ತಿಳಿಸಿದರು. ಸಂಬಳ, ಡಿಸೇಲ್ ವಾಹನಗಳ ಬಿಡಿ ಭಾಗಗಳ ದರ ಹೆಚ್ಚಳ, ಸೇರಿದಂತೆ ಹಲವು ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಕಳೆದ ೪ ವರ್ಷಗಳಿಂದ ಬಸ್ ಟಿಕೇಟ್ ದರ ಹೆಚ್ಚಳವಾಗಿಲ್ಲ, ದರ ಹೆಚ್ಚಳ ಮಾಡುವುದರ ಬಗ್ಗೆ ಚಿಂತನೆ ನಡೆದಿದೆ ಇನ್ನೂ ನಿರ್ಣಯ ಕೈಗೊಂಡಿಲ್ಲ ಎಂದರು.