SK Home Ad
Home ಅಪರಾಧ ಕೈದಿಯಿಂದ ಬೆದರಿಕೆ ದೂರು ದಾಖಲು

ಕೈದಿಯಿಂದ ಬೆದರಿಕೆ ದೂರು ದಾಖಲು

0
117

ಪಣಜಿ: ಕೈದಿ ವಿಕಟ್ ಭಗತ್ ಗೋವಾದ ಕೊಲ್ವಾಲ್ ಜೈಲಿನ ಬ್ಲಾಕ್ ನಂ. ೨ರ ಗೇಟ್ ತಡೆದು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಭಗತ್ ವಿರುದ್ಧ ಕೊಲ್ವಾಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರಾಗೃಹ ಅಧೀಕ್ಷಕ ಶಂಕರ್ ಗಾಂವ್ಕರ್ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರಾಗೃಹ ಆಡಳಿತವು ಕೈದಿ ವಿಕಟ್ ಭಗತ್ ಅವರನ್ನು ವಿಚಾರಣಾಧೀನ ಕೈದಿಗಳ ಘಟಕ ೨ರಿಂದ ೪ನೇ ಘಟಕಕ್ಕೆ ಸ್ಥಳಾಂತರಿಸಲು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಜಾರಿಗೊಳಿಸಲು ದೂರುದಾರರಾದ ಅಧೀಕ್ಷಕ ಗಾಂವ್ಕರ್ ಮತ್ತು ನೌಕರರು ತೆರಳಿದ್ದರು. ಈ ವೇಳೆ ಕೈದಿ ವಿಕಟ್ ಭಗತ್ ಇತರ ಕೈದಿಗಳನ್ನು ಕರೆಸಿ ಇಲಾಖೆಯ ಗೇಟ್‌ಗಳನ್ನು ತಡೆದು ದೂರುದಾರರಿಗೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಐಪಿಸಿಯ ಸೆಕ್ಷನ್ ೧೮೬ ಮತ್ತು ೫೦೬ (೨) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್‌ಸ್ಪೆಕ್ಟರ್ ವಿಜಯ್ ರಾಣೆ ಅವರ ಮಾರ್ಗದರ್ಶನದಲ್ಲಿ ಕಾನ್‌ಸ್ಟೆಬಲ್ ಅನಿಲ್ ಪಿಲ್ಗಾಂವ್ಕರ್ ಅವರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.