Home Advertisement
Home ತಾಜಾ ಸುದ್ದಿ ಭೂ ಪರಿಹಾರ‌‌ ಒದಗಿಸಲು ಒತ್ತಾಯಿಸಿ ಕುಡತಿನಿ ಬಂದ್

ಭೂ ಪರಿಹಾರ‌‌ ಒದಗಿಸಲು ಒತ್ತಾಯಿಸಿ ಕುಡತಿನಿ ಬಂದ್

0
78

ಬಳ್ಳಾರಿ: ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡ ರೈತರ ಭೂಮಿಗೆ ಸೂಕ್ತ ಪರಿಹಾರ ಒದಗಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ತಾಲೂಕು ಮತ್ತು ಕುಡತಿನಿ ಘಟಕ ಭೂಸಂತ್ರಸ್ತರ ಹೋರಾಟ ಸಮಿತಿ ಹಾಗೂ ಸಿಐಟಿಯು ಮತ್ತು ರಾಜ್ಯ ರೈತ ಪ್ರಾಂತ್ಯ ಸಂಘ ವತಿಯಿಂದ ಕುಡತಿನಿ ಪಟ್ಟಣ ಬಂದ್ ಮಾಡಲಾಗಿದೆ.
ಬೆಳಗ್ಗೆ ಆರು ಗಂಟೆಯಿಂದಲೇ ಭೂ ಸಂತ್ರಸ್ತರು ರಸ್ತೆಗೆ ಇಳಿದು ಸಂಚಾರ ತಡೆ ನಡೆಸಿದರು. ಅಂಗಡಿ‌ ಮುಂಗಟ್ಟುಗಳು ಸ್ವಯಂ ಬಂದ್ ಮಾಡಿ‌ ಪ್ರತಿಭಟನೆಗೆ ಸಾಥ್ ನೀಡಿದರು. ಕೆಐಎಡಿಬಿ ಯು ಇಲ್ಲಿನ. ರೈತರ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ‌ ವಶಪಡಿಸಿಕೊಂಡು ಹಲವು ಕಂಪನಿಗಳಿಗೆ ನೀಡಿದೆ. ಸ್ವಾಧೀನಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರ ‌ನೀಡಿಲ್ಲ. ಸಂತ್ರಸ್ತ‌ ಕುಟುಂಬಗಳಿಗೆ ಉದ್ಯೋಗ ನೀಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಕೂಡಲೇ ಭೂ ಸಂತ್ರಸ್ತರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Previous articleವೈದ್ಯಕೀಯ ವಿಮೆ ಮೇಲಿನ ಜಿಎಸ್‌ಟಿ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ
Next articleದೇವರ ವಿಗ್ರಹ ಬಳಿ‌‌ ದರ್ಶನ್ ಫೋಟೊ‌‌ ಇಟ್ಟು ಪೂಜೆ: ಅರ್ಚಕ ವಜಾ