ಬಾಗಲಕೋಟೆ(ಇಳಕಲ್): ಈ ವರ್ಷ ರಾಜ್ಯ ಸರಕಾರದಿಂದ ಕೊಡಮಾಡುವ ನೂರು ಪ್ರಶಸ್ತಿಗಳಲ್ಲಿ ಇಳಕಲ್ ತಾಲೂಕಿಗೆ ಮೂರು ಪ್ರಶಸ್ತಿಗಳು ದೊರೆತಿವೆ.
ಸಮಾಜ ಸೇವೆಯಲ್ಲಿ ತೊಡಗಿ ನಗರದಲ್ಲಿ ಶೃಂಗೇರಿ ಶಾರದಾ ಪೀಠದ ವತಿಯಿಂದ ಶಾರದಾ ಮಂದಿರವನ್ನು ಪ್ರಾರಂಭಿಸಿರುವ ನೀಲಕಂಠ ಕಾಳಗಿಯವರಿಗೆ, ರಂಗಭೂಮಿಯ ವೃತ್ತಿ ಮತ್ತು ಹವ್ಯಾಸಿ ಕಲಾವಿದೆಯಾಗಿ ಇದೇ ವರ್ಷ ಜಿಲ್ಲಾ ಪ್ರಶಸ್ತಿಗೆ ಪಾತ್ರರಾಗಿದ್ದ ಸುನಂದಾ ಕಂದಗಲ್ಲ ಮತ್ತು ತಾಲೂಕಿನ ವಜ್ಜಲ ಗ್ರಾಮದ ಸಾಹಿತಿ ಪತ್ರಕರ್ತ ಸಿದ್ದಪ್ಪ ತಿಮ್ಮಣ್ಣ ಮಾದರ ಇವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.