SK Home Ad
Home ನಮ್ಮ ಜಿಲ್ಲೆ ಧಾರವಾಡ ಎರಡು ಬಾಗಿಲು ಇತ್ತು ಇದೀಗ ಮೂರು ಬಾಗಿಲು: ಪ್ರಲ್ಹಾದ ಜೋಶಿ

ಎರಡು ಬಾಗಿಲು ಇತ್ತು ಇದೀಗ ಮೂರು ಬಾಗಿಲು: ಪ್ರಲ್ಹಾದ ಜೋಶಿ

0
166
joshi

ಧಾರವಾಡ: ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೋಟಿ‌ಕಂಠ ಗಾಯನ ಮುಕ್ತಾಯದ ಬಳಿಕ ಕಾಂಗ್ರೆಸ್ ನಲ್ಲಿ ಈಗಾಗಲೇ ಮನೆಯೊಂದು ಎರಡು ಬಾಗಿಲು ಇತ್ತು ಇದೀಗ ಮೂರು ಬಾಗಿಲು ಆಗಿದೆ ಖರ್ಗೆ ಆ್ಯಂಡ ಖರ್ಗೆ ಬೆಂಬಲಿಗರ ಗುಂಪೊಂದು ಆಗುತ್ತಿದೆ
ಒಂದು ಮಾಡಲಿ, ಎರಡು ಮಾಡಲಿ, ಮೂರು ಯಾತ್ರೆ ಮಾಡಲಿ, ಕಾಂಗ್ರೆಸ್ ಸುಧಾರಿಸುವುದಿಲ್ಲ ಅವರ ಸ್ಥಿತಿ ದೇಶಾದ್ಯಂತ ನಾವು ನೋಡುತ್ತಿದ್ದೇವೆ ಈಗಾಗಲೇ ನಾನು 15 ದಿನದಲ್ಲಿ ಗುಜರಾತಿಗೆ ಎರಡು ಬಾರೀ ಹೋಗಿ ಬಂದಿದ್ದೇನೆ ಅವರಿಗೆ ಅಲ್ಲಿ ಅಡ್ರೆಸ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ದೇಶದಲ್ಲಿ ಎಲ್ಲಾ ಕಡೆ ನಾಪತ್ತೆಯಾಗುತಿದ್ದಾರೆ ಇಲ್ಲೂ ಪೂರ್ತಿ ನಾಪತ್ತೆಯಾಗುತ್ತಾರೆ ಹಿಂದಿ ಹೇರಿಕೆ ವಿಚಾರ ಅಮಿತ್ ಷಾ ಈ ಬಗ್ಗೆ ಒಂದು ಆರ್ಟಿಕಲ್ ಬರೆದಿದ್ದಾರೆ ಭಾರತ ಸರ್ಕಾರ ಎನ್ಇಪಿ ಯಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ತರುತ್ತಿದೆ
ಎಲ್ಲಾ ಕೋರ್ಸಗಳನ್ನು ಕನ್ನಡದಲ್ಲಿ ಇರಬೇಕು ಎಂದು ಮತ್ತು ಆಯಾ ಭಾಷೆಯಲ್ಲಿ ಇರಬೇಕು ಭಾರತದ ಭಾಷೆಗಳು ಒಂದು ಕಮಲವಿದ್ದಂತೆ ಎಲ್ಲಾ ಭಾಷೆಗಳು ಕಮಲದ ದಳ ಇದ್ರೆ, ಹಿಂದಿ ಅದರ ಮಧ್ಯೆದಲ್ಲಿದೆ ಎಂದು ರವೀಂದ್ರನಾಥ ಟ್ಯಾಗೋರ್ ಅಂದಿದ್ದರು
ದಳಗಳಿಲ್ಲದೇ ಕಮಲ ಹೂವಾಗುದಿಲ್ಲಾ ಇದು ದಳಗಳನ್ನು ಹೊಂದಿರುವಂತ ಭಾಷೆ ನಾವು ಎಲ್ಲಾ ರಾಜ್ಯಗಳಿಗೆ ಅನುಮತಿ ಕೊಟ್ಟಿದ್ದೇವೆ
ಪ್ರದಾನಿ ಮೋದಿ ಇಂಜಿನಿಯರಿಂಗ್, ಮೆಡಿಕಲ್ ಸೈನ್ಸ್ ನಲ್ಲಿ ಕನ್ನಡ ಭಾಷೆ ಯಾಗಬೇಕು ಎಂದಿದ್ದಾರೆ ಇಷ್ಟು ಆದ್ಯತೆ ಕೇಂದ್ರ ಸರ್ಕಾರ ಕೊಟ್ಟಿದೆ ಕೆಲವರಿಗೆ ಮಾಡಲಿಕ್ಕೆ ಕೆಲಸವಿಲ್ಲಾ ಹೀಗಾಗಿ ಮತ್ತೆ ಬೇರೆ ವಿಷಯ ಇಲ್ಲಾ ಬರೇ ಅನವಶ್ಯಕ ಹಿಂದಿ ಹೇರಿಕೆ ನೆಪದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುತ್ತಾರೆ ಹಿಂದಿ ಹೆರಿಕೆ ನೆಪದಲ್ಲಿ ಇಂಗ್ಲೀಷ್ಬ ಭಾಷೆಗೆ ಪ್ರೋತ್ಸಾಹ ಕೊಡುತಿದ್ದಾರೆ ಈ ಕಡೆ ಹಿಂದಿ ಬೆಳೆಯಲಿಕ್ಕೆ ಕೊಡುತ್ತಿಲ್ಲಾ ಕನ್ನಡ ಬೆಳೆಯಲಿಕ್ಕೆ ಕೊಡುತಿಲ್ಲಾ ಎಂದರು.