ಶಿವಮೊಗ್ಗ: ಮರಕ್ಕೆ ಗೂಡ್ಸ್‌ ಡಿಕ್ಕಿ ಮೂವರ ದುರ್ಮರಣ

0
21

ಶಿವಮೊಗ್ಗ: ಶಿವಮೊಗ್ಗ ನಗರದ ಹೊರವಲಯ ಗೋಂಧಿ ಚಟ್ನಹಳ್ಳಿ ಬಳಿ ಅಕ್ಟೋಬರ್ 30 ರ ಮುಂಜಾನೆ ಗೂಡ್ಸ್ ವಾಹನವೊಂದು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಅಸಾದುಲ್ಲಾ (50), ಸಾದಿಕ್ ( 30) ಮತ್ತು ಫಿರೋಜ್ ( 22) ಮೃತಪಟ್ಟವರೆಂದು ಗುರುತಿಸಲಾಗಿದೆ. ಅಸಾದುಲ್ಲಾ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನವರಾಗಿದ್ದಾರೆ. ಸಾದಿಕ್ ಮತ್ತು ಫಿರೋಜ್ ಉತ್ತರ ಪ್ರದೇಶ ರಾಜ್ಯದವರೆಂದು ಹೇಳಲಾಗಿದೆ.

ವಾಹನದಲಿದ್ದ ಮತ್ತೋರ್ವನಿಗೆ ಗಂಭೀರ ಗಾಯವಾಗಿದ್ದು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲಿಸಿದ್ದಾರೆ.

Previous articleಬೆಂಗಳೂರಿನಲ್ಲಿ ನೊಬೆಲ್ ಪುರಸ್ಕೃತರ ಸಂವಾದ – ಭವಿಷ್ಯತ್ತಿನ ಕುರಿತ ಚರ್ಚೆ
Next articleಗಂಡನನ್ನೇ ಕೊಲೆ ಮಾಡಲು ಸ್ಕೆಚ್​ ಹಾಕಿದಾಕೆ ಸಹೋದರರ ಸಮೇತ ಅಂದರ್‌

LEAVE A REPLY

Please enter your comment!
Please enter your name here