ಗೋವಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿ ದೀಪಾವಳಿಯನ್ನು ಭಾರತೀಯ ನೌಕಾಪಡೆಯ ವೀರರೊಂದಿಗೆ ಆಚರಿಸಿದರು. ಗೋವಾ ಮತ್ತು ಕಾರವಾರ ಕರಾವಳಿಯಲ್ಲಿರುವ ಭಾರತದ ಪ್ರೌಢಸಮುದ್ರ ನೌಕಾ ನೌಕೆ ಐಎನ್ಎಸ್ ವಿಕ್ರಾಂತ್ ಗೆ ಭೇಟಿ ನೀಡಿ ನೌಕಾಪಡೆಯ ಸಿಬ್ಬಂದಿಯೊಂದಿಗೆ ಬೆಳಕಿನ ಹಬ್ಬವನ್ನು ಸಂಭ್ರಮಿಸಿದರು.
ದೀಪಾವಳಿ ಹಬ್ಬದ ವೇಳೆ ನೌಕಾಪಡೆಯ ಜವಾನರ ಜೊತೆ ಸಂವಾದ ನಡೆಸಿದ ಮೋದಿ, “ದೇಶದ ಗಡಿಗಳ ಸುರಕ್ಷತೆಗೆ ಶ್ರಮಿಸುತ್ತಿರುವ ನೌಕಾಪಡೆಯ ಧೀರ ಯೋಧರೊಂದಿಗೆ ಹಬ್ಬ ಆಚರಿಸುವುದು ನನಗೆ ಭಾಗ್ಯ,” ಎಂದು ಹೇಳಿದರು. ಅವರು ಈ ಕ್ಷಣವನ್ನು ಸ್ಮರಣೀಯ ಎಂದು ವಿಶ್ಲೇಷಿಸಿ, ರಾಷ್ಟ್ರದ ಪ್ರತಿಯೊಬ್ಬ ನಾಗರಿಕರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು.
ಒಂದು ಕಡೆ, ನನಗೆ ಅನಂತ ದಿಗಂತಗಳಿವೆ, ಅನಂತ ಆಕಾಶವಿದೆ, ಮತ್ತು ಇನ್ನೊಂದು ಕಡೆ, ಅನಂತ ಶಕ್ತಿಗಳನ್ನು ಒಳಗೊಂಡಿರುವ ಈ ದೈತ್ಯ ಐಎನ್ಎಸ್ ವಿಕ್ರಾಂತ್ ನನ್ನಲ್ಲಿದೆ. ಸಾಗರದ ನೀರಿನ ಮೇಲೆ ಸೂರ್ಯನ ಕಿರಣಗಳ ಹೊಳಪು ವೀರ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತಿದೆ ಎಂದು ಮೋದಿ ಅವರು ನೌಕಾಪಡೆಯ ಶೌರ್ಯ, ತ್ಯಾಗ ಮತ್ತು ತಂತ್ರಜ್ಞಾನ ಸಾಮರ್ಥ್ಯವನ್ನು ಮೆಚ್ಚಿಕೊಂಡು, “ನಮ್ಮ ನೌಕಾಪಡೆ ಭಾರತದ ಭದ್ರತೆಯ ಕವಚವಾಗಿದೆ,” ಎಂದು ಶ್ಲಾಘಿಸಿದರು.
ದೇಶದ ಅಂತರಂಗ ಸುರಕ್ಷತೆ ಕುರಿತು ಮಾತನಾಡಿ, ಮಾವೋವಾದಿ ನಕ್ಸಲರ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳ ಫಲಿತಾಂಶದ ಬಗ್ಗೆ ಹೇಳಿದರು. “ಇಂದು ದೇಶದಲ್ಲಿ ಕೇವಲ 11 ಶೇಕಡಾ ಪ್ರದೇಶದಲ್ಲಿ ಮಾತ್ರ ನಕ್ಸಲ್ ಪ್ರಭಾವ ಉಳಿದಿದೆ. ಛತ್ತೀಸಗಢದ ಕೇವಲ ಮೂರು ಜಿಲ್ಲೆಗಳಲ್ಲಿ ನಕ್ಸಲಿಸಂ ಕಾಣಿಸಿಕೊಂಡಿದೆ. 100ಕ್ಕೂ ಹೆಚ್ಚು ಜಿಲ್ಲೆಗಳು ಈಗ ನಕ್ಸಲ್ ಪ್ರಭಾವದಿಂದ ಮುಕ್ತಗೊಂಡಿವೆ, ಅಲ್ಲದೆ ನಕ್ಸಲ್ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ವೇಗವಾಗಿ ನಡೆಯುತ್ತಿವೆ,” ಎಂದು ಹೇಳಿದರು.
ಗಿಮ್ಮಿಕ್ಸ್, ಬರೀ ಜನರನ್ನು ಯಾಮಾರಿಸೋದೇ ಆಯ್ತು, ಚೀನಾ ಅತಿಕ್ರಮಿತ ಪ್ರದೇಶ ತೆರವುಗೊಳಿಸುವ ಮೂಲಕ ಆಚರಿಸಬಹುದಿತ್ತಲ್ವಾ