Home Advertisement
Home ಕ್ರೀಡೆ IPL 2026 Auction: RCBಗೆ ಸೇರಿದ ವೆಂಕಟೇಶ್ ಅಯ್ಯರ್‌

IPL 2026 Auction: RCBಗೆ ಸೇರಿದ ವೆಂಕಟೇಶ್ ಅಯ್ಯರ್‌

0
73

ಅಬುಧಾಬಿ: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್‌ 2026ರ ಮಿನಿ ಹರಾಜಿನಲ್ಲಿ ಎಡಗೈ ಸ್ಫೋಟಕ ಬ್ಯಾಟರ್ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂ.ಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. 2 ಕೋಟಿ ರೂ. ಮೂಲಬೆಲೆ ಹೊಂದಿದ್ದ ವೆಂಕಟೇಶ್ ಅಯ್ಯರ್‌ಗಾಗಿ ಹರಾಜಿನ ವೇಳೆ ಕೊಲ್ಕತ್ತ ನೈಟ್ ರೈಡರ್ಸ್ (KKR), ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಗುಜರಾತ್ ಟೈಟನ್ಸ್ (GT) ತಂಡಗಳು ತೀವ್ರ ಪೈಪೋಟಿ ನಡೆಸಿದವು. ಆದರೆ ಅಂತಿಮವಾಗಿ ಆರ್‌ಸಿಬಿ ಕೈ ಮೇಲಾಯಿತು.

ಕಳೆದ ಆವೃತ್ತಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್‌ರನ್ನು ಕೆಕೆಆರ್ ತಂಡವು 23.75 ಕೋಟಿ ರೂ.ಗೆ ಖರೀದಿಸಿತ್ತು. ಆ ಮೂಲಕ ಅವರು ಕೆಕೆಆರ್ ಇತಿಹಾಸದ ಎರಡನೇ ಅತ್ಯಂತ ದುಬಾರಿ ಆಟಗಾರರಾಗಿದ್ದರು. ಈ ಬಾರಿ however, ಮಿನಿ ಹರಾಜಿನಲ್ಲಿ ಆರ್‌ಸಿಬಿ ತಂಡವು ಚಾಣಾಕ್ಷ ತಂತ್ರ ಬಳಸಿ ಕೇವಲ 7 ಕೋಟಿ ರೂ.ಗೆ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದು, ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: 25.20 ಕೋಟಿ ರೂ.ಗೆ ಕೊಲ್ಕತ್ತ ಸೇರಿದ ಕ್ಯಾಮರೂನ್ ಗ್ರೀನ್

ಐಪಿಎಲ್‌ನಲ್ಲಿ ಮೇಲ್ದರ್ಜೆಯ ಆರಂಭಿಕ ಅಥವಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ವೆಂಕಟೇಶ್ ಅಯ್ಯರ್, ದೊಡ್ಡ ಇನ್ನಿಂಗ್ಸ್ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಅಗತ್ಯವಿದ್ದಾಗ ಮಧ್ಯಮ ವೇಗದ ಬೌಲಿಂಗ್ ಮಾಡುವಲ್ಲಿಯೂ ಸಹಾಯಕನಾಗುತ್ತಾರೆ. ಆರ್‌ಸಿಬಿ ತಂಡಕ್ಕೆ ಇದು ಬ್ಯಾಟಿಂಗ್ ವಿಭಾಗದಲ್ಲಿ ಮತ್ತಷ್ಟು ಬಲ ತುಂಬಲಿದೆ.

ಹರಾಜಿಗೂ ಮುನ್ನ ಆರ್‌ಸಿಬಿ ತಂಡವು ತನ್ನ ಕೋರ್ ಆಟಗಾರರನ್ನು ಉಳಿಸಿಕೊಂಡಿತ್ತು. ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಹಾಗೂ ರಸಿಖ್ನಾ ಸಲಾಂ ಅವರನ್ನು retain ಮಾಡಿಕೊಂಡಿದೆ.

ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಲ್ಲಿ ಪಂದ್ಯ ಖಚಿತ

ವೆಂಕಟೇಶ್ ಅಯ್ಯರ್ ಸೇರ್ಪಡೆ ಮೂಲಕ ಆರ್‌ಸಿಬಿ ತಂಡದ ಬ್ಯಾಟಿಂಗ್ ಲೈನ್‌ಅಪ್ ಇನ್ನಷ್ಟು ಆಕ್ರಮಣಕಾರಿ ಆಗಿದ್ದು, 2026ರ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಕಾಯ್ದುಕೊಳ್ಳುವ ದಿಟ್ಟ ಉದ್ದೇಶವನ್ನು ತಂಡ ಪ್ರದರ್ಶಿಸಿದೆ. ಅಭಿಮಾನಿಗಳಲ್ಲೂ ಈ ಖರೀದಿ ಭಾರಿ ಉತ್ಸಾಹ ಮೂಡಿಸಿದೆ.

Previous articleವಾರಕ್ಕೆ 3 ದಿನ ರಜೆ! ಹೊಸ ಕಾರ್ಮಿಕ ಕಾನೂನಿನ ‘ಬಿಗ್ ಅಪ್‌ಡೇಟ್’ ಇಲ್ಲಿದೆ
Next article1600 PSI ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ: ಡಾ.ಜಿ.ಪರಮೇಶ್ವರ್