ಕಸ್ತೂರಿ ಮಾಸಿಕ ಕರ್ಮವೀರ ವಾರಪತ್ರಿಕೆಗಳು ಸಂಗ್ರಹಯೋಗ್ಯವಾಗಿವೆ
ಇಳಕಲ್ : ಭಾರತದ ಸ್ವಾತಂತ್ರ್ಯ ಏಕೀಕರಣದ ವಿಷಯದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಪಾತ್ರ ಅತ್ಯಂತ ಪ್ರಮುಖವಾಗಿತ್ತು ಎಂದು ಪತ್ರಿಕೆಯ ನಿತ್ಯ ಓದುಗ ಗಂಗಪ್ಪ ಬಡಿಗೇರ ಅಭಿಪ್ರಾಯಪಟ್ಟರು.
ಧ್ವನಿ ಸಂಘಟನೆ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಿಕೆಯ ವಿಷಯವಾಗಿ ಮಾತನಾಡಿದ ಅವರು ಇಳಕಲ್ ದಲ್ಲಿ ನಡೆದ ಮೂರು ದರೋಡೆಗಳ ಬಗ್ಗೆ ಪತ್ರಿಕೆ ಸುದ್ದಿಯನ್ನು ಪ್ರಕಟ ಮಾಡಿತ್ತು ನಿತ್ಯ ಪೇಟೆ ಧಾರಣಿ ನೀಡಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಟ್ಟ ಶ್ರೇಯಸ್ಸು ಪತ್ರಿಕೆಗೆ ಸಲ್ಲುತ್ತದೆ ಪತ್ರಿಕೆಯಲ್ಲಿ ವರದಿ ಬಂದ ನಂತರ ಇಲ್ಲಿನ ಕೆಲವು ಅಂಗಡಿಗಳು ಬೋರ್ಡ್ ಮೇಲೆ ಬರೆದು ಹಾಕುತ್ತಿದ್ದುದನ್ನು ಅವರು ಸ್ಮರಿಸಿದರು. ಅದೇ ರೀತಿ ಕಸ್ತೂರಿ ಮಾಸಿಕ ಕರ್ಮವೀರ ವಾರಪತ್ರಿಕೆಗಳು ಸಂಗ್ರಹಯೋಗ್ಯವಾಗಿವೆ ಹೀಗಾಗಿ ಲೋಕ ಶಿಕ್ಷಣ ಟ್ರಸ್ಟ್ ಈ ನಾಡಿನಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಹೇಳಿದರು