ಬೆಂಗಳೂರು: 2025-26ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಈ ವರ್ಷ ಪ್ರಮುಖ ನಟ ಹಾಗೂ ಬಹುಭಾಷಾ ಕಲಾವಿದ ಪ್ರಕಾಶ್ ರಾಜ್ ಸೇರಿದಂತೆ ಒಟ್ಟು 70 ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅಕ್ಟೋಬರ್ 30ರಂದು ಸುದ್ದಿಗೋಷ್ಠಿ ನಡೆಸಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದರು. ಈ ಬಾರಿ ಪ್ರಶಸ್ತಿಯ ಆಯ್ಕೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ.
ಪ್ರಮುಖವಾಗಿ, ಈ ಬಾರಿ ಮೊದಲ ಬಾರಿಗೆ ಯಾವುದೇ ಅರ್ಜಿ ಆಹ್ವಾನಿಸದೆ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಸಚಿವರು ತಿಳಿಸಿದ್ದಾರೆ, “ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯ ಅಡಿಯಲ್ಲಿ ಕ್ಷೇತ್ರವಾರು ಸಾಧಕರನ್ನು ಗುರುತಿಸಿ ಆಯ್ಕೆ ಸಲಹಾ ಸಮಿತಿಯು ನಾಲ್ಕೈದು ಸಭೆಗಳಲ್ಲಿ ಅಂತಿಮ ಪಟ್ಟಿ ತಯಾರಿಸಿದೆ. ಈ ಬಾರಿ ಯಾವುದೇ ಸಂಘ–ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ, ಸಂಪೂರ್ಣವಾಗಿ ವೈಯಕ್ತಿಕ ಸಾಧಕರಿಗೆ ಮಾತ್ರ ಗೌರವ ನೀಡಲಾಗಿದೆ ಎಂದರು.
ಒಟ್ಟು 70 ಸಾಧಕರ ಪೈಕಿ 12 ಮಂದಿ ಮಹಿಳೆಯರು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸಾಹಿತ್ಯ, ಕಲೆ, ಶಿಕ್ಷಣ, ಕ್ರೀಡೆ, ಸಮಾಜಸೇವೆ, ವಿಜ್ಞಾನ ಹಾಗೂ ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಗೌರವ ದೊರಕಿದೆ.
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 1ರಂದು ವಿಧಾನ ಸೌಧದ ನಾದಪ್ರಭು ಕೆಂಪೇಗೌಡ ವೇದಿಕೆಯಲ್ಲಿ ನಡೆಯಲಿದೆ. ವಿಜೇತರಿಗೆ ₹5 ಲಕ್ಷ ನಗದು, ಸ್ಮರಣ ಫಲಕ ಹಾಗೂ ಗೌರವ ಪತ್ರವನ್ನು ನೀಡಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ರಾಜ್ಯದಾದ್ಯಂತ ಅಭಿನಂದನೆಗಳ ಹಾರವು ಹರಿದು ಬರುತ್ತಿದೆ. ಕನ್ನಡ ಸಂಸ್ಕೃತಿ ಪ್ರೇಮಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪುರಸ್ಕೃತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರ: ಪ್ರೊ. ರಾಜೇಂದ್ರ ಚೆನ್ನಿ- ಶಿವಮೊಗ್ಗ. ತುಂಬಾಡಿ ರಾಮಯ್ಯ- ತುಮಕೂರು. ಪ್ರೊ ಅರ್ ಸುನಂದಮ್ಮ- ಚಿಕ್ಕಬಳ್ಳಾಪುರ. ಡಾ.ಎಚ್.ಎಲ್ ಪುಷ್ಪ – ತುಮಕೂರು. ರಹಮತ್ ತರೀಕೆರೆ – ಚಿಕ್ಕಮಗಳೂರು. ಹ.ಮ. ಪೂಜಾರ – ವಿಜಯಪುರ
ಜಾನಪದ ಕ್ಷೇತ್ರ: ಬಸಪ್ಪ ಭರಮಪ್ಪ ಚೌಡ್ಕಿ-ಕೊಪ್ಪಳ. ಬಿ. ಟಾಕಪ್ಪ ಕಣ್ಣೂರು-ಶಿವಮೊಗ್ಗ. ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ-ಬೆಳಗಾವಿ. ಹನುಮಂತಪ್ಪ, ಮಾರಪ್ಪ, ಚೀಳಂಗಿ-ಚಿತ್ರದುರ್ಗ, ಎಂ. ತೋಪಣ್ಣ-ಕೋಲಾರ. ಸೋಮಣ್ಣ ದುಂಡಪ್ಪ ಧನಗೊಂಡ-ವಿಜಯಪುರ. ಸಿಂಧು ಗುಜರನ್ದ- ದಕ್ಷಿಣ ಕನ್ನಡ. ಎಲ್. ಮಹದೇವಪ್ಪ ಉಡಿಗಾಲ-ಮೈಸೂರು.
ಸಂಗೀತ ಕ್ಷೇತ್ರ: ದೇವೆಂದ್ರಕುಮಾರ ಪತ್ತಾರ್- ಕೊಪ್ಪಳ, ಮಡಿವಾಳಯ್ಯ ಸಾಲಿ-ಬೀದರ್.
ನೃತ್ಯ ಕ್ಷೇತ್ರ: ಪ್ರೊ. ಕೆ. ರಾಮಮೂರ್ತಿ ರಾವ್- ಮೈಸೂರು
ಚಲನಚಿತ್ರ /ಕಿರುತೆರೆ ಕ್ಷೇತ್ರ: ಪ್ರಕಾಶ್ ರಾಜ್- ದಕ್ಷಿಣ ಕನ್ನಡ. ವಿಜಯಲಕ್ಷ್ಮೀ ಸಿಂಗ್- ಕೊಡಗು
ವೈದ್ಯಕೀಯ ಕ್ಷೇತ್ರ: ಆಲಮ್ಮ ಮಾರಣ್ಣ- ತುಮಕೂರು. ಡಾ. ಜಯರಂಗನಾಥ್- ಬೆಂಗಳೂರು ಗ್ರಾಮಾಂತರ
ಸಂಕೀರ್ಣ ಕ್ಷೇತ್ರ: ಉಮೇಶ ಪಂಬದ -ದಕ್ಷಿಣ ಕನ್ನಡ. ಡಾ. ರವೀಂದ್ರ ಕೋರಿಶೆಟ್ಟಿರ್- ಧಾರವಾಡ. ಕೆ.ದಿನೇಶ್- ಬೆಂಗಳೂರು. ಶಾಂತರಾಜು -ತುಮಕೂರು. ಜಾಫರ್ ಮೊಹಿಯುದ್ದೀನ್- ರಾಯಚೂರು. ಪೆನ್ನ ಓಬಳಯ್ಯ- ಬೆಂಗಳೂರು ಗ್ರಾಮಾಂತರ. ಶಾಂತಿ ಬಾಯಿ.ಕೆ ಬಳ್ಳಾರಿ. ಪುಂಡಲೀಕ ಶಾಸ್ತ್ರೀ(ಬುಡಬುಡಕೆ) – ಬೆಳಗಾವಿ
ಹೊರನಾಡು/ ಹೊರದೇಶ ಕ್ಷೇತ್ರ: ಜಕರಿಯ ಬಜಪೆ (ಸೌದಿ), ಪಿ ವಿ ಶೆಟ್ಟಿ (ಮುಂಬೈ)
ಪರಿಸರ ಕ್ಷೇತ್ರ: ರಾಮೇಗೌಡ- ಚಾಮರಾಜನಗರ, ಮಲ್ಲಿಕಾರ್ಜುನ ನಿಂಗಪ್ಪ- ಯಾದಗಿರಿ
ಕೃಷಿ ಕ್ಷೇತ್ರ: ಡಾ.ಎಸ್.ವಿ.ಹಿತ್ತಲಮನಿ-ಹಾವೇರಿ, ಎಂ ಸಿ ರಂಗಸ್ವಾಮಿ-ಹಾಸನ.
ಮಾಧ್ಯಮ ಕ್ಷೇತ್ರ: ಕೆ.ಸುಬ್ರಮಣ್ಯ-ಬೆಂಗಳೂರು, ಅಂಶಿ ಪ್ರಸನ್ನಕುಮಾರ್-ಮೈಸೂರು, ಬಿ.ಎಂ ಹನೀಫ್- ದಕ್ಷಿಣ ಕನ್ನಡ, ಎಂ ಸಿದ್ಧರಾಜು- ಮಂಡ್ಯ,
ವಿಜ್ಞಾನ/ ತಂತ್ರಜ್ಞಾನ ಕ್ಷೇತ್ರ: ರಾಮಯ್ಯ ಚಿಕ್ಕಬಳ್ಳಾಪುರ, ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ – ದಾವಣಗೆರೆ, ಡಾ. ಆರ್. ವಿ ನಾಡಗೌಡ- ಗದಗ.
ಸಹಕಾರ ಕ್ಷೇತ್ರ: ಶೇಖರಗೌಡ ವಿ ಮಾಲಿಪಾಟೀಲ್ -ಕೊಪ್ಪಳ.
ಯಕ್ಷಗಾನ ಕ್ಷೇತ್ರ: ಕೋಟ ಸುರೇಶ ಬಂಗೇರ- ಉಡುಪಿ , ಐರಬೈಲ್ಆನಂದ ಶೆಟ್ಟಿ ಉಡುಪಿ, ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ)- ಉತ್ತರ ಕನ್ನಡ.
ಬಯಲಾಟ ಕ್ಷೇತ್ರ: ಗುಂಡೂರಾಜ್-ಹಾಸನ
ರಂಗಭೂಮಿ ಕ್ಷೇತ್ರ: ಹೆಚ್.ಎಂ. ಪರಮಶಿವಯ್ಯ,ಬೆಂಗಳೂರು ದಕ್ಷಿಣ (ರಾಮನಗರ), ಎಲ್.ಬಿ.ಶೇಖ್ (ಮಾಸ್ತರ್)-ವಿಜಯಪುರ, ಬಂಗಾರಪ್ಪ ಖುದಾನ್ಪುರ-ಬೆಂಗಳೂರು, ಮೈಮ್ ರಮೇಶ್- ದಕ್ಷಿಣ ಕನ್ನಡ, ಡಿ.ರತ್ನಮ್ಮ ದೇಸಾಯಿ- ರಾಯಚೂರು.
ಶಿಕ್ಷಣ ಕ್ಷೇತ್ರ: ಡಾ. ಎಂ.ಆರ್. ಜಯರಾಮ್-ಬೆಂಗಳೂರು, ಡಾ. ಎನ್ ಎಸ್ ರಾಮೇಗೌಡ-ಮೈಸೂರು , ಎಸ್. ಬಿ. ಹೊಸಮನಿ- ಕಲಬುರಗಿ, ರಾಜ್ ಶ್ರೀ ನಾಗರಾಜು- ಬೆಳಗಾವಿ.
ಕ್ರೀಡೆ ಕ್ಷೇತ್ರ: ಆಶೀಶ್ ಕುಮಾರ್ ಬಲ್ಲಾಳ್-ಬೆಂಗಳೂರು, ಎಂ ಯೋಗೇಂದ್ರ-ಮೈಸೂರು, ಡಾ. ಬಬಿನಾ ಎನ್.ಎಂ (ಯೋಗ)ಕೊಡಗು.
ನ್ಯಾಯಾಂಗ ಕ್ಷೇತ್ರ: ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ (ಪವನ್ ಕುಮಾರ್ ಭಜಂತ್ರಿ )-ಬಾಗಲಕೋಟೆ.
ಶಿಲ್ಪಕಲೆ ಕ್ಷೇತ್ರ: ಬಸಣ್ಣ ಮೋನಪ್ಪ ಬಡಿಗೇರ- ಯಾದಗಿರಿ, ನಾಗಲಿಂಗಪ್ಪ ಜಿ ಗಂಗೂರ- ಬಾಗಲಕೋಟೆ.
ಚಿತ್ರಕಲೆ ಕ್ಷೇತ್ರ: ಬಿ. ಮಾರುತಿ-ವಿಜಯನಗರ
ಕರಕುಶಲ ಕ್ಷೇತ್ರ: ಎಲ್. ಹೇಮಾಶೇಖರ್-ಮೈಸೂರು























