ಮುಂಬೈ: ಇಂಗ್ಲೆಂಡ್ ನ್ಯಾಯಾಲಯದಿಂದ ದೇಶ ತೊರೆಯದಂತೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಯಾವಾಗ ಮರಳುತ್ತೇನೆ ಎಂಬುದನ್ನು ನಿರ್ದಿಷ್ಟವಾಗಿ ಹೇಳುವ ಸ್ಥಿತಿಯಲ್ಲಿ ಇಲ್ಲ ಎಂದು ದೇಶಭ್ರಷ್ಟ ವಿಜಯ್ ಮಲ್ಯ ಬಾಂಬೆ ಹೈಕೋರ್ಟ್ಗೆ ತಿಳಿಸಿದ್ದಾನೆ.
ಮೊನ್ನೆಯಷ್ಟೇ ತನ್ನ ವಿರುದ್ಧ ಕೇಸುಗಳ ಕುರಿತ ಅರ್ಜಿ ವಿಚಾರಣೆ ನಡೆಸಬೇಕೆಂದರೆ ಭಾರತಕ್ಕೆ ವಾಪಸಾಗುವಂತೆ ಬಾಂಬೆ ಹೈಕೋರ್ಟ್ ಮಲ್ಯಗೆ ಕೊನೆಯ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ವಕೀಲ ಅಮಿತ್ ದೇಸಾಯಿ ಮೂಲಕ ಉತ್ತರ ಸಲ್ಲಿಸಿರುವ ಮಲ್ಯ, ಯುಕೆ ಕೋರ್ಟ್ ತನ್ನ ಪಾಸ್ಪೋರ್ಟ್ಅನ್ನು ಜಪ್ತಿ ಮಾಡಿದ್ದು, ದೇಶ ಬಿಟ್ಟು ಹೋಗದಂತೆ ನಿರ್ಬಂಧಿಸಿದೆ ಎಂದು ತಿಳಿಸಿದ್ದಾರೆ.




















