2026 ಚುನಾವಣೆಗೆ ಮುನ್ನ ಒಪಿಎಸ್ ನಿರ್ಧಾರ:ಸ್ಟಾಲಿನ್ಗೆ ಬಲವರ್ಧನೆ
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆಯಿಂದ ಉಚ್ಚಾಟಿತ ನಾಯಕ ಓ ಪನ್ನೀರ್ ಸೆಲ್ವಂ ಫೆಬ್ರವರಿ 27 ರಂದು ಚೆನ್ನೈನಲ್ಲಿ ಅಧಿಕೃತವಾಗಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದರು. ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಅವರ ಪುತ್ರ ಪಿ ರವೀಂದ್ರನಾಥ್ ಕುಮಾರ್ ಕೂಡ ಡಿಎಂಕೆ ಸೇರಿರುವುದು ಗಮನಾರ್ಹವಾಗಿದೆ.
2022ರಲ್ಲಿ ಎಡಪ್ಪಾಡಿ ಕೆ ಪಳನಿಸ್ವಾಮಿ ಜೊತೆಗಿನ ನಾಯಕತ್ವದ ಸಂಘರ್ಷದ ಬಳಿಕ ಒಪಿಎಸ್ ಅವರನ್ನು ಎಐಎಡಿಎಂಕೆ ಯಿಂದ ಉಚ್ಚಾಟಿಸಲಾಗಿತ್ತು.
ಇದನ್ನೂ ಓದಿ: ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಅಭಿವೃದ್ಧಿಯನ್ನೇ ಮರೆತ ಕಾಂಗ್ರೆಸ್
ಈ ಮಧ್ಯೆ ಒಪಿಎಸ್ ಬಣದ ಶಾಸಕ ಪಿ. ಅಯ್ಯಪ್ಪನ್ ವಿಧಾನಸಭೆಯಲ್ಲಿ ಸ್ಟಾಲಿನ್ ಅವರನ್ನು ಹೊಗಳಿ, ಮುಂದಿನ ಚುನಾವಣೆಯಲ್ಲಿಯೂ ಅವರು ಮುಖ್ಯಮಂತ್ರಿ ಆಗಬೇಕು ಎಂದು ಅಭಿಪ್ರಾಯಪಟ್ಟರು. ರಾಜ್ಯದ ಉಪಾಹಾರ ಯೋಜನೆಯನ್ನು ಅವರು ದೂರದೃಷ್ಟಿಯ ಕಾರ್ಯಕ್ರಮವೆಂದು ಶ್ಲಾಘಿಸಿದರು.
ಇನ್ನೊಂದೆಡೆ ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್, ಒಪಿಎಸ್ ವಿರುದ್ಧ ವಾಗ್ದಾಳಿ ನಡೆಸಿ, ಮೈತ್ರಿ ಆಯ್ಕೆ ಅವರ ಹಕ್ಕು ಆಗಿದ್ದರೂ ಜಯಲಲಿತಾ ಅವರ ಹೆಸರನ್ನು ರಾಜಕೀಯವಾಗಿ ಬಳಸುವುದು ಸ್ವೀಕಾರಾರ್ಹವಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ಅಜ್ಞಾತ ಸ್ಥಳದಿಂದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ರಿಲೀಸ್
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ 2026ರ ಮೊದಲಾರ್ಧದಲ್ಲಿ ಚುನಾವಣೆ ನಡೆಯಲಿದ್ದು, ಡಿಎಂಕೆ ನೇತೃತ್ವದ ಮೈತ್ರಿಕೂಟ ‘ದ್ರಾವಿಡ ಮಾದರಿ 2.0’ ಘೋಷಣೆಯೊಂದಿಗೆ ಮತ್ತೆ ಅಧಿಕಾರಕ್ಕೇರಲು ಸಜ್ಜಾಗಿದೆ. ಇದೇ ವೇಳೆ ನಟ-ರಾಜಕಾರಣಿ ವಿಜಯ ಅವರ ಟಿವಿಕೆ ಪ್ರವೇಶದಿಂದ ಸ್ಪರ್ಧೆ ತ್ರಿಕೋನಾಕಾರವಾಗುವ ನಿರೀಕ್ಷೆ ವ್ಯಕ್ತವಾಗಿದೆ.




















