ರಾಜ ಭವನಕ್ಕೆ ಬಾಂಬ್ ​ಬೆದರಿಕೆ ಕರೆ

0
7

ಬೆಂಗಳೂರು: ಬೆಂಗಳೂರಿನ ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಕರೆ ಮಾಡಿದ್ದಾನೆ ಎನ್ನಲಾದ ಘಟನೆ ನಡೆದಿದೆ.
ದುಷ್ಕರ್ಮಿಯೊಬ್ಬ ನಿನ್ನೆ ತಡ ರಾತ್ರಿ ಸುಮಾರು 11.30ಕ್ಕೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾನೆ. ಕರೆ ಬಂದ ಕೂಡಲೇ ಅಲರ್ಟ್ ಆದ ನಗರದ ಪೊಲೀಸರು, ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡ್ ಕರೆ ತಂದು ರಾಜಭವನವನ್ನು ಪರಿಶೀಲನೆ ನಡೆಸಿದ್ದಾರೆ. ಬಾಂಬ್‌ ಬೆದರಿಕೆ ಕರೆ ಸಂಬಂಧ ಬೆಂಗಳೂರಿನ ವಿಧಾನಸಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Previous articleನೈಋತ್ಯ ರೈಲ್ವೆ ವಲಯ ನೂತನ ಸಿಪಿಆರ್‌ಓ ಡಾ. ಮಂಜುನಾಥ್ ಅಧಿಕಾರ ಸ್ವೀಕಾರ
Next articleಕಾಶ್ಮೀರ: ಸುಪ್ರೀಂ ಕೋರ್ಟ್ ಆಶಯ ಈಡೇರಬೇಕಿದೆ