ನೊಂದಣಿ ಬಹುತೇಕ ಸ್ತಬ್ಧ: ಗುರಿ ಮುಟ್ಟುವುದು ಅಸಾಧ್ಯ

0
13

ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಚುರುಕುಗೊಳಿಸಲು ಆಗ್ರಹ

ಬೆಂಗಳೂರು: ದುರ್ಭಿಕ್ಷದಲ್ಲಿ ಅಧಿಕ ಮಾಸ ಎನ್ನುವಂತೆ ಈಗಾಗಲೇ ಈ ವರ್ಷದ ತೆರಿಗೆ ಸಂಗ್ರಹ ಶೇ.35% ಕುಂಠಿತವಾಗಿರುವಾಗ ರಾಜ್ಯದಲ್ಲಿ ಆಸ್ತಿ ನೊಂದಣಿ ಬಹುತೇಕ ಸ್ತಬ್ಧವಾಗಿದ್ದು, ತೆರಿಗೆ ಸಂಗ್ರಹ ಗುರಿ ಮುಟ್ಟುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಎದುರಾಗಿದೆ ಎಂದು ವಿರೋಧ ಪಕ್ಷದ ನಾಯಕ ಆ‌ರ್.ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, 2024-25 ನೇ ಸಾಲಿನ ತಮ್ಮ ಬಜೆಟ್ ಗುರಿ ಪ್ರಕಾರ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ₹26,000 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಬೇಕಿತ್ತು. ಅಂದರೆ ಮಾಸಿಕವಾಗಿ ಸರಾಸರಿ ₹2,167 ಕೋಟಿ ರೂಪಾಯಿ ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ಸಂಗ್ರಹವಾಗಬೇಕು.

ಆದರೆ ಸರ್ವರ್ ಸಮಸ್ಯೆ, ಕಾವೇರಿ ತಂತ್ರಾಂಶ ಸಮಸ್ಯೆಯಿಂದ ಪ್ರತಿನಿತ್ಯ 8,000 ರಿಜಿಸ್ಟ್ರೇಷನ್ ಆಗುತ್ತಿದ್ದ ಕಡೆ ಈಗ ಕೇವಲ 200 ರಿಜಿಸ್ಟ್ರೇಷನ್ ಆಗುತ್ತಿದೆ. ಡಿಸೆಂಬರ್ ವರೆಗೆ ಕೇವಲ 75% ಗುರಿ ಮುಟ್ಟಲಾಗಿದ್ದು, ಇನ್ನೂ ₹9,000 ಕೋಟಿಯಷ್ಟು ಸಂಗ್ರಹವಾಗಬೇಕಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಈ ವರ್ಷ ದೊಡ್ಡ ಮೊತ್ತದ ಆದಾಯ ಕೊರತೆ ಎದುರಿಸಬೇಕಾಗುವುದು ಗ್ಯಾರೆಂಟಿ.

ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಈ ಆರ್ಥಿಕ ವರ್ಷದಲ್ಲಿ ಇನ್ನುಳಿದಿರುವ 50 ದಿನಗಳಲ್ಲಾದರೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಚುರುಕುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

Previous articleಡಿಜಿಟಲ್ ಯುಗದಲ್ಲಿಯೂ ಜನರ ಪರದಾಟ: ಕರ್ನಾಟಕದ ಪಾಲಿಗೆ ದೊಡ್ಡ ಕಂಟಕ
Next articleಅವರ ಜೋತೆ ಪೇಮೆಂಟ್ ಸ್ವಾಮಿಗಳು ಇದ್ದಾರೆ ಅಷ್ಟೇ