ಖಾರದ ಪುಡಿ ಎರಚಿ ಕೊಲೆ: ನಾಲ್ವರ ಬಂಧನ

0
38


ಹುಬ್ಬಳ್ಳಿ: ಕಣ್ಣಿಗೆ ಖಾರದ ಪುಡಿ ಎರಚಿ ಓರ್ವನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ನಾಲ್ವರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.೨೭ ರಂದು ಹುಬ್ಬಳ್ಳಿಯ ಮಂಟೂರ ರಸ್ತೆ ನಿವಾಸಿಯಾದ ಸ್ಯಾಮುಯಲ್ ಮಬ್ಬು ಎಂಬಾತನನ್ನು ಕೊಲೆ ಮಾಡಿ, ಆರೋಪಿಗಳು ಪರಾರಿಯಾಗಿದ್ದು, ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸುಲೇಮಾನ್ ಬಳ್ಳಾರಿ, ಟೈಟಾಸ್ ಬಾಬು ವೆನ್ನಮ್ಮ, ಮಹ್ಮದಷಾ ಫಿರೋಜಾಬಾದ , ಮೌಲಾಸಾಬ್ ರಮಜಾನವರಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಕೊಲೆಗೆ ಹಣಕಾಸಿನ ವ್ಯವಹಾರ ಮತ್ತು ಕೌಟುಂಬಿಕ ಕಲಹದ ವಿಷಯವಾಗಿ ಕೊಲೆ ನಡೆದಿರುವ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿದ್ದು, ತನಿಖೆ ಮುಂದುವರಿಸಲಾಗಿದೆ.

Previous articleಸಲುಗೆಯಿಂದ ಮಹಿಳೆಯನ್ನು ಮಾತನಾಡಿಸಿದ ಹಿನ್ನೆಲೆ ವ್ಯಕ್ತಿಯ ಕೊಲೆ
Next articleದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ: 179 ಜನ ಸಾವು