Home Advertisement
Home ತಾಜಾ ಸುದ್ದಿ ಸೆಬಿ ಅಧ್ಯಕ್ಷರ ಪದಚ್ಯುತಿ ಆಗ್ರಹಿಸಿ ಇ.ಡಿ. ಕಚೇರಿಗೆ ಘೇರಾವ್

ಸೆಬಿ ಅಧ್ಯಕ್ಷರ ಪದಚ್ಯುತಿ ಆಗ್ರಹಿಸಿ ಇ.ಡಿ. ಕಚೇರಿಗೆ ಘೇರಾವ್

0
162

ನವದೆಹಲಿ: ಸೆಬಿ ಅಧ್ಯಕ್ಷರನ್ನು ತೆಗೆದುಹಾಕುವಂತೆ ಒತ್ತಾಯಿಸಿ ನಾವು ಪ್ರತಿ ರಾಜ್ಯ ರಾಜಧಾನಿಯಲ್ಲಿ ಜಾರಿ ನಿರ್ದೇಶನಾಲಯದ ಕಚೇರಿಗೆ ಘೇರಾವ್ ಮಾಡುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಕೆಸಿ ವೇಣುಗೋಪಾಲ್ ಹೇಳಿದರು.


ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಮತ್ತು ಪಿಸಿಸಿ ಅಧ್ಯಕ್ಷರ ಸಭೆ ನಡೆಸಿದ್ದೇವೆ. ದೇಶದಲ್ಲಿ ನಡೆಯುತ್ತಿರುವ ದೊಡ್ಡ ಹಗರಣಗಳಲ್ಲಿ ಒಂದಾದ ಹಿಂಡೆನ್‌ಬರ್ಗ್ ಬಹಿರಂಗಪಡಿಸುವಿಕೆ, ಅದಾನಿ ಮತ್ತು ಸೆಬಿಗೆ ಸಂಬಂಧಿಸಿದ ಹಗರಣಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ರಾಷ್ಟ್ರವ್ಯಾಪಿ ಆಂದೋಲನವನ್ನು ಆಗಸ್ಟ್ 22 ರಂದು ನಡೆಸಲು ಸರ್ವಾನುಮತದಿಂದ ನಿರ್ಧರಿಸಿದ್ದೇವೆ ಎಂದರು.