Home Advertisement
Home ತಾಜಾ ಸುದ್ದಿ ವಿಮಾನ ಸುಟ್ಟು ಭಸ್ಮವಾದರೂ ಸುರಕ್ಷಿತವಾಗಿ ಸಿಕ್ತು ಭಗವದ್ಗೀತೆ ಪುಸ್ತಕ

ವಿಮಾನ ಸುಟ್ಟು ಭಸ್ಮವಾದರೂ ಸುರಕ್ಷಿತವಾಗಿ ಸಿಕ್ತು ಭಗವದ್ಗೀತೆ ಪುಸ್ತಕ

0
218

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ ನಡೆದ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಸುಟ್ಟು ಕರಕಲಾದರು. ಆದರೆ, ವಿಮಾನದ ಅವಶೇಷಗಳಲ್ಲಿ ಸಿಕ್ಕ ಭಗವದ್ಗೀತೆ ಪುಸ್ತಕ ಏನೂ ಆಗದೇ ಸುರಕ್ಷಿತವಾಗಿ ದೊರಕಿದೆ.
ಏರ್ ಇಂಡಿಯಾ ವಿಮಾನ ಅಪಘಾತದ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯ ಒಂದು ಆವೃತ್ತಿಯು ಹಾನಿಗೊಳಗಾಗದೇ ಉಳಿದಿದೆ. ಇಂದು ವಿಮಾನ ಅಪಘಾತದ ಅವಶೇಷಗಳ ನಡುವೆ ಪತ್ತೆಯಾದ ಭಗವದ್ಗೀತೆಯ ಹಾನಿಯಾಗದ ಪುಟಗಳನ್ನು ವ್ಯಕ್ತಿಯೊಬ್ಬ ಪ್ರದರ್ಶಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಣದಲ್ಲಿ ವೈರಲ್‌ ಆಗಿದೆ.