Home Advertisement
Home ತಾಜಾ ಸುದ್ದಿ ನಾನೇ ಅನುದಾನ ಕೊಟ್ಟಿಲ್ಲ…

ನಾನೇ ಅನುದಾನ ಕೊಟ್ಟಿಲ್ಲ…

0
121

ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಅದನ್ನ ಸಾಬೀತು ಮಾಡಬೇಕಲ್ಲವೇ…

ಬೆಂಗಳೂರು: ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಗೆ ಮಾಡಿ ಜಯನಗರ ವಿಧಾನಸಭಾ ಕ್ಷೇತ್ರ ಕೈಬಿಟ್ಟಿರುವುದು ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಶ್ನಿಸಿದ್ದರು ಇದ್ದಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ನಾನೇ ಅನುದಾನ ಕೊಟ್ಟಿಲ್ಲ. ಅವರು ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಅದನ್ನ ಸಾಬೀತು ಮಾಡಬೇಕಲ್ಲವೇ. ಜಯನಗರ ಶಾಸಕ ಸಿಕೆ ರಾಮಮೂರ್ತಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು, ಮೊದಲು ಅವರು ಅರೋಪಗಳನ್ನು ಸಾಬೀತು ಮಾಡಲಿ ನಂತರ ಅನುದಾನದ ಬಗ್ಗೆ ಯೋಚಿಸೋಣ ಎಂದರು.