ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಸಂಬಂಧಿತ ಚಟುವಟಿಕೆಗಳನ್ನು ಮುಂದಿಟ್ಟುಕೊಂಡು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಪ್ರಮುಖ ಸಂಯೋಜನಾ ತಂಡವನ್ನು ರಚಿಸಿದ್ದಾರೆ.
ಈ ಕುರಿತು ಪಕ್ಷದ ಕೇಂದ್ರ ಕಚೇರಿ ‘ಜಗನ್ನಾಥ ಭವನ’ದಿಂದ ಪ್ರಕಟಣೆ ಹೊರಬಿದ್ದಿದ್ದು, ಅದರಲ್ಲಿ ಪ್ರಾಧಿಕಾರದ ಸಂಯೋಜಕರ ತಂಡ, ಸಂಘಟನಾತ್ಮಕ ಜಿಲ್ಲಾ ಸಂಯೋಜಕರು, ಮತ್ತು 5 ಪಾಲಿಕೆಗಳ ಪ್ರಮುಖರು ಹಾಗೂ ಸಹಪ್ರಮುಖರುಗಳನ್ನು ಘೋಷಿಸಲಾಗಿದೆ.
ಈ ತಂಡದ ಮೂಲಕ ಬಿಜೆಪಿ, ಬೆಂಗಳೂರಿನ ಸ್ಥಳೀಯ ಚುನಾವಣೆಯಲ್ಲಿ ತೀವ್ರ ಚಟುವಟಿಕೆಗಳನ್ನು ನಡೆಸಿ, ಸಂಘಟನಾ ಬಲವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಯೋಜಕರ ತಂಡದ ಸದಸ್ಯರು:
ಬಿ. ವೈ. ವಿಜಯೇಂದ್ರ
ಆರ್. ಅಶೋಕ್
ಚಲವಾದಿ ನಾರಾಯಸ್ವಾಮಿ
ಡಿ ವಿ ಸದಾನಂದಗೌಡ
ಎಸ್ ಸುರೇಶ ಕುಮಾರ್
ಶೋಭಾ ಕರಂದ್ಲಾಜೆ
ಪಿ. ಸಿ ಮೋಹನ್
ಸಿ. ಎನ್. ಮಂಜುನಾಥ್
ತೇಜಸ್ವಿ ಸೂರ್ಯ
ಡಾ. ಕೆ. ಸುಧಾಕರ್
ಎಸ್.ಎಸ್. ನಂದೀಶ್ ರೆಡ್ಡಿ
ಸಂಘಟನಾತ್ಮಕ ಜಿಲ್ಲಾ ಪ್ರಮುಖರು:
ಬೆಂಗಳೂರು ದಕ್ಷಿಣ: ಸಿ. ಕೆ. ರಾಮಮೂರ್ತಿ
ಬೆಂಗಳೂರು ಉತ್ತರ: ಎಸ್. ಹರೀಶ್
ಬೆಂಗಳೂರು ಕೇಂದ್ರ: ಎ. ಆರ್ ಸಪ್ತಗಿರಿ ಗೌಡ
ಪಾಲಿಕೆ ಪ್ರಮುಖರು ಹಾಗೂ ಸಹ ಪ್ರಮುಖರು:
ಬೆಂಗಳೂರು ಪೂರ್ವ: ಎಂ. ಎನ್. ನಾಗರಾಜ್, ಕೆ.ಎಸ್. ನವೀನ್
ಬೆಂಗಳೂರು ಉತ್ತರ: ಮುನಿರತ್ನ, ಭಾರತಿ ಶೆಟ್ಟಿ
ಬೆಂಗಳೂರು ದಕ್ಷಿಣ: ಬಿ. ಎ ಬಸವರಾಜು (ಬೈರತಿ), ಎನ್. ರವಿಕುಮಾರ್
ಬೆಂಗಳೂರು ಕೇಂದ್ರ: ಸಿ. ಎನ್ ಅಶ್ವಥನಾರಾಯಣ, ಡಿ. ಎಸ್.ಅರುಣ್
ಬೆಂಗಳೂರು ಪಶ್ಚಿಮ: ಕೆ. ಗೋಪಾಲಯ್ಯ, ಎ. ನಾರಾಯಣ ಸ್ವಾಮಿ, ಅಶ್ವಥ್ ನಾರಾಯಣ
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯಲಿರುವ ಚುನಾವಣೆ ಸಂಬಂಧಿತ ಚಟುವಟಿಕೆಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಈ ಕೆಳಕಂಡ ಪ್ರಮುಖರನ್ನು ಪ್ರಾಧಿಕಾರದ ಸಂಯೋಜಕರ ತಂಡ, ಸಂಘಟನಾತ್ಮಕ ಜಿಲ್ಲೆಯ ಸಂಯೋಜಕರು ಹಾಗೂ 5 ಪಾಲಿಕೆಗಳಿಗೆ ಪ್ರಮುಖರು ಹಾಗೂ ಸಹ ಪ್ರಮುಖರನ್ನಾಗಿ ನಿಯೋಜಿಸಿ ಆದೇಶಿಸಿದ್ದಾರೆ.