ಬೆಂಗಳೂರು: ಪ್ರತಿ ವರ್ಷ ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರಶಸ್ತಿಗಳಿಗೆ ಸಂಯುಕ್ತ ಕರ್ನಾಟಕದ ವಿಜಯನಗರ ಜಿಲ್ಲಾ ವರದಿಗಾರ ಕೆ.ಲಕ್ಷ್ಮಣ್ ಹಾಗೂ ಚಿಕ್ಕೋಡಿ ವರದಿಗಾರ ಸಂಜೀವ್ ಕಾಂಬ್ಳೆ ಸೇರಿದಂತೆ 40 ಮಂದಿ 2025ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಾಗೂ ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.
ಈ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಕಟಣೆ ಹೊರಡಿದ್ದು, ಡಿ. ಕುಮಾರಸ್ವಾಮಿ, ಬನಶಂಕರ ಆರಾಧ್ಯ, ಹೇಮಾ ವೆಂಕಟ್, ಮಂಜುನಾಥ್ ವೈ.ಎಲ್., ಅನಂತ ನಾಡಿಗ್, ಗುರುರಾಜ್ ವಾಮನರಾವ್ ಜಮಖಂಡಿ, ಎಂ.ಎಂ. ಪಾಟೀಲ್, ಎಲ್.ವಿವೇಕಾನಂದ, ಆರ್.ಪಿ. ಭರತ್ರಾಜ್ ಸಿಂಗ್, ಪ್ರೊ.ಪೂರ್ಣಾನಂದ, ಮೊಹಮ್ಮದ್ ಅಸದ್, ತುಂಗರೇಣುಕಾ, ಮೊಹಿಯುದ್ದೀನ್ ಪಾಷಾ, ರುದ್ರಪ್ಪ ಅಸಂಗಿ, ಸತೀಶ್ ಆಚಾರ್ಯ, ಸೋಮಶೇಖರ್ ಪಡುಕೆರೆ, ಗುಲ್ಮಾರ್ ಮಿರ್ಝಾ, ಗಣೇಶ ಹೆಗಡೆ ಇಟಗಿ, ಆರತಿ ಎಚ್.ಎನ್., ಕೆ.ಲಕ್ಷ್ಮಣ, ಉಮಾ ಅನಂತ್, ಮಂಜುನಾಥ ಮಹಾಲಿಂಗಪೂರ, ಮಂಜುನಾಥ ಟಿ., ಮಲ್ಲಿಕಾಚರಣ ವಾಡಿ, ಪ್ರತಿಮಾ ನಂದಕುಮಾರ್, ಅಮಿತ್ ಉಪಾಧ್ಯೆ, ಪ್ರಭುಸ್ವಾಮಿ ನಾಟೇಕರ್, ಸಿದ್ದೇಗೌಡ ಎನ್., ಸಂಜೀವ ಕಾಂಬ್ಳೆ, ನೀಲಕಂಠ ಕೆ.ಆರ್. ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆಂದೋಲನ ದತ್ತಿ ಪ್ರಶಸ್ತಿಗೆ ಕೊಪ್ಪಳದ ಸುವರ್ಣ ಗಿರಿ ಪತ್ರಿಕೆ, ಅಭಿಮಾನಿ ದತ್ತಿ ಪ್ರಶಸ್ತಿಗೆ ಹುಣಸೂರಿನ ಶಿವು, ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಬೆಳಗಾವಿಯ ಸಂತೋಷ ಈ. ಚಿನಗುಡಿ, ಅಭಿಮನ್ಯ ದತ್ತಿ ಪ್ರಶಸ್ತಿಗೆ ಸಿಂಧನೂರಿನ ಚಂದ್ರಶೇಖರ ಬೆನ್ನೂರು, ಪ್ರಜಾ ಸಂದೇಶ ದತ್ತಿ ಪ್ರಶಸ್ತಿಗೆ ಕೊಪ್ಪಳದ ನಾಗರಾಜು ವೈ., ಡಾ. ಬಿ.ಆರ್.ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿಗೆ ಡಾ.ಎ.ನಾರಾಯಣ, ಅರಗಿಣಿ ದತ್ತಿ ಪ್ರಶಸ್ತಿಗೆ ಚೇತನ್ ನಾಡಿಗೇರ, ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿಗೆ ಸಿದ್ದೇಶ್ ತಾಗಟೂರು, ಸಿ.ವಿ.ರಾಜಗೋಪಾಲ್ ದತ್ತಿ ಪ್ರಶಸ್ತಿಗೆ ಪ್ರಹ್ಲಾದ್ ಕುಳಲಿ, ಕೆ.ಯು.ಡಬ್ಲ್ಯು.ಜೆ. ದತ್ತಿ ಪ್ರಶಸ್ತಿಗೆ ಕೆ.ಆನಂದ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ 30 ಪತ್ರಕರ್ತರು, ವಿವಿಧ ದತ್ತಿ ಪ್ರಶಸ್ತಿಗಳಿಗೆ 10 ಮಂದಿ ಚಿಂತಕರು, ಬರಹಗಾರರು ಹಾಗೂ 2025ನೇ ಸಾಲಿನ ವಿಶೇಷ ಪ್ರಶಸ್ತಿಗೆ ಸರಿತಾ ರೈ ಅವರನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಪ್ರಶಸ್ತಿಯು 1 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಅಕಾಡೆಮಿ ಮತ್ತು ದತ್ತಿ ಪ್ರಶಸ್ತಿಗಳು 50,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತವೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.









